ವಿದ್ಯಾರ್ಥಿಗಳ ನಡುವೆ ಚೂರಿ ಇರಿತ ಪ್ರಕರಣ – ಸೋಷಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದನೆಗೆ ಯತ್ನಿಸಿದವರ ವಿರುದ್ಧ ದೂರು

0

ಪುತ್ತೂರು: ಈಗಾಗಲೇ ಸುಖಾಂತ್ಯ ಕಂಡಿರುವ ವಿದ್ಯಾರ್ಥಿಗಳ ನಡುವಿನ ಚೂರಿ ಇರಿತ ಆರೋಪದ ಪ್ರಕರಣವನ್ನು ಮತ್ತೆ ಸಾಮಾಜಿಕ ಜಾಲತಾಣದಲ್ಲಿ, ವಿದ್ಯಾರ್ಥಿಯ ಭಾವ ಚಿತ್ರ ಪ್ರದರ್ಶಿಸಿ ದ್ವೇಷ ಭಾವನೆ ಬಿತ್ತರಿಸುವ ಸಂದೇಶವನ್ನು ರವಾನಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ರಾಹಿಂ ಎಂಬವರ ವಿರುದ್ಧ ಸಾರ್ವಜನಿಕ ಹಿತದೃಷ್ಟಿಯಿಂದ ನವೀನ್ ಎಂಬವರು ಪುತ್ತೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಪ್ರಾಪ್ತ ವಿದ್ಯಾರ್ಥಿಯ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿಸಿ ಧರ್ಮ ಧರ್ಮದ ಬಗ್ಗೆ ಅವಮಾನ ಮತ್ತು ಧಾರ್ಮಿಕ ನಂಬಿಕೆಯ ಬಗ್ಗೆ ಅಸಡ್ಡೆ ತೋರಿಸುವಂತೆ ಮಾಡಿರುವ ಇಬ್ರಾಹಿಂ ಸುರ್ಯ ಅವರ ವಿರುದ್ಧ ಮತ್ತು ಸಂದೇಶವನ್ನು ಬರೆದುಕೊಟ್ಟ ಗುಂಪು ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಇಡ್ಕಿದು ಗ್ರಾಮದ ನವೀನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here