ವೇದಶಂಕರ ನಗರದ ಶ್ರೀ ಮಾಧವ ಶಿಶು ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

0

ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ವಿವಿಧ ವಿನೋಧಾವಳಿಯೊಂದಿಗೆ ನಡೆಯಿತು.


ಯುವ ಉದ್ಯಮಿ ಶ್ರೀಕಾಂತ್ ಪಟೇಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಗೆಳೆಯರು 94 ಇದರ ಅಧ್ಯಕ್ಷ ರಾಧಾಕೃಷ್ಣ ಭಟ್ ಬೊಳ್ಳಾವು ಭಾಗವಹಿಸಿದ್ದರು. ವೇದಿಕೆಯಲ್ಲಿ ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ, ಪೋಷಕ ಸಂಘದ ಅಧ್ಯಕ್ಷೆ ಶ್ರೀದೇವಿ, ಹಿರಿಯರಾದ ಕಂಗ್ವೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಾತೃ ಮಂಡಳಿ ಸಂಚಾಲಕಿ ಶ್ಯಾಮಲಾ ಶೆಣೈ ದೀಪ ಬೆಳೆಗಿಸಿ ಉದ್ಘಾಟಿಸಿದರು. ಶಿವಪ್ರಸಾದ್-ಶುಭಶ್ರೀ ದಂಪತಿಯ ಮಗು ಶ್ರೀರಾಮನನ್ನು ಬಾಲಕೃಷ್ಣನಾಗಿ ತೊಟ್ಟಿಲ ತೂಗುವಿಕೆ ಶಾಸ್ತ್ರ ನಡೆಸಲಾಯಿತು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಹರಿರಾಮಚಂದ್ರ, ಯು.ಜಿ. ರಾಧಾ, ವಿದ್ಯಾಧರ ಜೈನ್, ಯು. ರಾಜೇಶ್ ಪೈ, ಜಯಶ್ರೀ ಜನಾರ್ದನ್, ಸುಬ್ರಹ್ಮಣ್ಯ ಶೆಣೈ, ಚಂದ್ರಶೇಖರ್ ಮಡಿವಾಳ, ರಾಮಚಂದ್ರ ಮಣಿಯಾಣಿ, ಶಶಿಧರ್ ಶೆಟ್ಟಿ, ಸುನಿಲ್ ಸಂಗಮ್ , ಸುಧಾಕರ್ ಶೆಟ್ಟಿ, ಸುಜಾತ ಕೃಷ್ಣ ಆಚಾರ್ಯ, ಕಿಶೋರ್ ಜೋಗಿ, ಉಷಾಚಂದ್ರ ಮುಳಿಯ, ಅಚಲ್ ಉಬರಡ್ಕ, ಯತೀಶ್ ಶೆಟ್ಟಿ, ರಾಜು ಅಲಗುರಿ ಮಜಲು, ಜಗದೀಶ್ ಶೆಟ್ಟಿ, ರಮೇಶ್ ಕಟಿಲೇಶ್ವರಿ, ವಿಮಲಾ ತೇಜಾಕ್ಷಿ, ಚೈತ್ರಾ, ಕಾಂತಿಮಣಿ, ಚಂದ್ರಾವತಿ, ಯು.ಕೆ. ರೋಹಿತಾಕ್ಷ , ಹರೀಶ್ ಭಂಡಾರಿ, ವಿನೋದ್ ಕುಮಾರ್ ಮತ್ತಿತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here