ನಿಡ್ಪಳ್ಳಿ: ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಕಿನ್ನಿಮಾಣಿ – ಪೂಮಾಣಿ , ಹುಲಿಭೂತ ದೈವಸ್ಥಾನ ಆರ್ಲಪದವು – ಪಾಣಾಜೆ ಇದರ ದಾರಂದ ಮುಹೂರ್ತ ಮತ್ತು ನಿಧಿಕುಂಭ ಸಮರ್ಪಣೆ ಕಾರ್ಯಕ್ರಮ ಸೆ.5 ರಂದು ನಡೆಯಲಿದ್ದು ಅದರ ಕುರಿತು ಪೂರ್ವಭಾವಿ ಸಭೆ ಸೆ.1 ರಂದು ಸಂಜೆ ಗಂಟೆ 4:30 ಕ್ಕೆ ನಡೆಯಲಿದೆ.
ಈ ಸಭೆಯಲ್ಲಿ ವಾರ್ಡ್ ಸಮಿತಿಯ ಅಧ್ಯಕ್ಷ ಕಾರ್ಯದರ್ಶಿಗಳು ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿರುವಂತೆ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.