Video: ಪುರುಷರಕಟ್ಟೆ ವಿಶ್ವಾಸ್ ಹಾರ್ಡ್‌ವೇರ್‌ಗೆ ಬೆಂಕಿ – ಇಲ್ಲಿದೆ ಘಟನಾ ಸ್ಥಳದ ಸಂಪೂರ್ಣ ಚಿತ್ರಣ

0

ಪುತ್ತೂರು: ಪುರುಷರಕಟ್ಟೆಯಲ್ಲಿರುವ (Purusharakatte) ನವೀನ್ ಅವರ ಮಾಲಕತ್ವದ ವಿಶ್ವಾಸ್ ಹಾರ್ಡ್‌ವೇರ್ (Vishwas Hardware) ಅಂಗಡಿಗೆ ಆ.31ರಂದು ರಾತ್ರಿ ಬೆಂಕಿ ಹೊತ್ತಿಕೊಂಡು ಅಂಗಡಿಯಲ್ಲಿದ್ದ ಬಹುತೇಕ ಹಾರ್ಡ್‌ವೇರ್ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿದ್ದು ಹಾರ್ಡ್‌ವೇರ್ ಅಂಗಡಿ ಕಟ್ಟಡಕ್ಕೂ ಹಾನಿಯಾಗಿದೆ. ಹಾರ್ಡ್‌ವೇರ್ ಸಾಮಾಗ್ರಿ ಮತ್ತು ಅಂಗಡಿಗೆ ಹಾನಿಯಾಗಿರುವ ಪರಿಣಾಮ ಒಟ್ಟಾರೆಯಾಗಿ ರೂ.೫೦ ಲಕ್ಷ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸಂಶಯಿಸಲಾಗಿದೆ. ಅಗ್ನಿ ಅನಾಹುತದಿಂದ ಹಾನಿಗೊಳಗಾದ ವಿಶ್ವಾಸ್‌ ಹಾರ್ಡ್‌ ವೇರ್‌ ನ ಸದ್ಯದ ಸ್ಥಿತಿಯ ಕುರಿತಾಗಿ ನಮ್ಮ ವರದಿಗಾರರು ಮಾಡಿರುವ ಗ್ರೌಂಡ್‌ ರಿಪೋರ್ಟ್‌ ನ ವಿಡಿಯೋ ಇಲ್ಲಿದೆ..

LEAVE A REPLY

Please enter your comment!
Please enter your name here