ನಾಳೆ ಕಡಬ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0

ಆಲಂಕಾರು:ಧಾರ್ಮಿಕ ಹಬ್ಬಗಳಾದ ಗೌರಿ ಗಣೇಶ ಹಬ್ಬ , ಈದ್ ಮಿಲಾದ್‌ ಮತ್ತು ಮೇರಿ ಮಾತಾ ಹಬ್ಬದ ಆಚರಣೆಯನ್ನು ಶಾಂತಿಯುತವಾಗಿ ನಡೆಸಲು ಸಾರ್ವಜನಿಕರ ಸಹಕಾರ ನೀಡುವ ಕುರಿತು ನಾಳೆ ಸೆ.6 ರಂದು ಬೆ.10.00 ಗಂಟೆಗೆ ಸರಿಯಾಗಿ ಕಡಬ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಲಿದೆ .

ಈ ಸಭೆಗೆ ಕಡಬ ಠಾಣಾ ವ್ಯಾಪ್ತಿಯ ಎಲ್ಲಾ ಗಣೇಶೋತ್ಸವ ಸಮಿತಿಯ ನೇತಾರರು, ಎಲ್ಲಾ ಮಸೀದಿಯ ಮುಖ್ಯಸ್ಥರು, ಚರ್ಚ್‌ ನ ಮುಖ್ಯಸ್ಥರು ,ಎಲ್ಲಾ ಧಾರ್ಮಿಕ ರಾಜಕೀಯ ಮುಖಂಡರು ಸಭೆಯಲ್ಲಿ ಭಾಗವಹಿಸುವಂತೆ ಕಡಬ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಅಭಿನಂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here