ಸಬಳೂರು: ದಿ| ವರದರಾಜ ಶೆಟ್ಟಿ ಕುಟುಂಬಕ್ಕೆ ಧನಸಹಾಯ

0

ಕಡಬ: ಇತ್ತೀಚೆಗೆ ನಿಧನರಾದ ಕೊಯಿಲ ಗ್ರಾಮದ ಕೆರೆಕೋಡಿ ನಿವಾಸಿ ವರದರಾಜ ಶೆಟ್ಟಿ ಅವರ ಕುಟುಂಬಕ್ಕೆ ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀರಾಮ ಗೆಳೆಯರ ಬಳಗ, ಬಿಜೆಪಿ ಸಬಳೂರು ಬೂತ್ ಸಮಿತಿ ಸದಸ್ಯರಿಂದ ಮತ್ತು ದಾನಿಗಳಿಂದ ಸಂಗ್ರಹಿಸಲಾದ ಧನಸಹಾಯವನ್ನು ಮೃತ ವರದರಾಜ ಶೆಟ್ಟಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.


ಈ ಸಂದರ್ಭ ಕೊಯಿಲ ಗ್ರಾ.ಪಂ ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ, ಸದಸ್ಯ ಚಿದಾನಂದ ಪಾನ್ಯಾಲು, ಸಬಳೂರು ಬಿಜೆಪಿ ಬೂತ್ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಸಂಕೇಶ, ಪ್ರಮುಖರಾದ ರವೀಂದ್ರ ಸಂಕೇಶ, ಸಬಳೂರು ಶ್ರೀರಾಮ ಗೆಳೆಯರ ಬಳಗದ ಪ್ರಮುಖರಾದ ಮೋಹನ್ ಓಕೆ, ದಿನೇಶ್ ಬುಡಲೂರು, ಪುನಿತ್ ಸೀಗೆತ್ತಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here