ನೆಲ್ಯಾಡಿ: ಬಿರುಗಾಳಿಗೆ 4 ಮನೆ, 2 ವಿದ್ಯುತ್ ಕಂಬಗಳಿಗೆ ಹಾನಿ

0

ನೆಲ್ಯಾಡಿ: ಪರಿಸರದಲ್ಲಿ ಬೀಸಿದ ಬಿರುಗಾಳಿಗೆ 4 ಮನೆ ಹಾಗೂ 2 ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಸೆ.10ರಂದು ರಾತ್ರಿ ನಡೆದಿದೆ.

ಭಾರೀ ಬಿರುಗಾಳಿ ಹಾಗೂ ಮಳೆಗೆ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಬಳಿಯ ಜನತಾ ಕಾಲೋನಿಯಲ್ಲಿ ನಾಲ್ಕು ಮನೆಗಳ ಮೇಲ್ಚಾವಣಿ ಶೀಟ್ ಹಾಗೂ ಅಲ್ಲೇ ಸಮೀಪದ ಎರಡು ವಿದ್ಯುತ್ ಕಂಬಗಳು ಹಾನಿಗೊಂಡಿವೆ. ಜನತಾ ಕಾಲೋನಿ ನಿವಾಸಿಗಳಾದ ಐತ್ತಪ್ಪ, ಬಾಬು ಆಚಾರಿ, ಲೋಕೇಶ್, ಇಸುಬು ಎಂಬವರ ಮನೆಯ ಮೇಲ್ಚಾವಣಿ ಶೀಟ್‌ಗಳು ಬಿದ್ದು ಹಾನಿಗೊಂಡಿವೆ. ಇವರ ಮನೆ ಸಮೀಪದ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಮೆಸ್ಕಾಂ ನೆಲ್ಯಾಡಿ ಶಾಖಾ ಜೆಇ ರಾಜನ್, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ಅಬ್ದುಲ್ ಜಬ್ಬಾರ್ ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here