ತ್ಯಾಗರಾಜನಗರ: ಸ್ಕೂಟರ್ ಅಪಘಾತ- ಚಿಕಿತ್ಸೆ ಫಲಕಾರಿಯಾಗದೆ ಕೀರ್ತನ್‌ ಗೌಡ ನಿಧನ

0

ಪುತ್ತೂರು: ಸ್ಕೂಟರ್‌ವೊಂದು ಅಪಘಾತಗೊಂಡು ಸವಾರ ಗಂಭೀರ ಗಾಯಗೊಂಡು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ವ್ಯಕ್ತಿ ಸೆ.11ರ ಮಧ್ಯರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆಯ್ಯೂರು ಗ್ರಾಮದ ಎರಕ್ಕಳ ಬೆಳಿಯಪ್ಪ ಗೌಡರವರ ಪುತ್ರ ಕೀರ್ತನ್ ಗೌಡ ಎಂಬವರು ಮೃತಪಟ್ಟವರು.

ಸೆ.10 ರಂದು ಮಧ್ಯರಾತ್ರಿ ಕೀರ್ತನ್ ಗೌಡ ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ ತ್ಯಾಗರಾಜನಗರದಲ್ಲಿ ಪಲ್ಟಿಯಾಗಿತ್ತು, ಈ ಘಟನೆಯಲ್ಲಿ ಕೀರ್ತನ್‌ ಗಂಭೀರವಾಗಿ ಗಾಯಗೊಂಡಿದ್ದರು.

ಪುತ್ತೂರಿನಲ್ಲಿ ಶ್ರೀ ಗಣೇಶನ ಶೋಭಾಯಾತ್ರೆ ನೋಡಿಕೊಂಡು ಮನೆಗೆ ತನ್ನ ಸ್ಕೂಟರ್‌ನಲ್ಲಿ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಸ್ಕೂಟರ್ ಬಿದ್ದ ಶಬ್ದಕ್ಕೆ ಸ್ಥಳೀಯ ಮನೆಯವರು ಆಗಮಿಸಿದ್ದರು ಆ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಗಾಯಕ ಬಾಲಕೃಷ್ಣ ನೆಟ್ಟಾರ್‌ ಗಾಯಾಳುವಿನ ಪರಿಚಯ ಹಿಡಿದು ಮನೆಯವರಿಗೆ ಮಾಹಿತಿ ನೀಡಿದ್ದರು.

ಗಂಭೀರ ಗಾಯಗೊಂಡಿದ್ದು ಕೀರ್ತನ್ ಗೌಡ ಅವರನ್ನು ತಕ್ಷಣವೇ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದು ಅಲ್ಲಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here