ಪೆರ್ನೆ: ಜನಮಂಗಲ ಕಾರ್ಯಕ್ರಮದಡಿ ಕಮೋಡ್ ವ್ಹೀಲ್ ಚೇರ್ ಹಸ್ತಾಂತರ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವಿಟ್ಲ ಇದರ ಪೆರ್ನೆ ವಲಯದ ಪೆರ್ನೆ ಬಿ ಕಾರ್ಯಕ್ಷೇತ್ರದ ’ಅಣ್ಣಪ್ಪ ಕಳೆಂಜ’ ಸಂಘದ ಸದಸ್ಯರಾದ ಮೋನಪ್ಪ ಗೌಡ ಬೊಳ್ಳೆತ್ತುರವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ನಡೆದಾಡಲು ಅಸಾಧ್ಯವಾಗಿದ್ದು ಶ್ರೀ ಕ್ಷೇತ್ರದಿಂದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾಗಿರುವ ಕಮೋಡ್ ವ್ಹೀಲ್ ಚೇರ್ ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿ ಜಯಂತಿ, ಜನಜಾಗೃತಿ ವೇದಿಕೆ ಸದಸ್ಯರಾದ ನವೀನ್ ಕುಮಾರ್ ಪದಬರಿ, ವಲಯ ಮೇಲ್ವಿಚಾರಕರಾದ ಶಾರದಾ ಎ, ಸೇವಾಪ್ರತಿನಿಧಿಗಳಾದ ಶಶಿಕಲಾ, ಅಶ್ಮಿತಾ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರಾದ ಸುರೇಶ್, ಗೋಪಾಲ ಸಪಲ್ಯ, ಪುರುಷೋತ್ತಮ, ಕೃಷ್ಣಪ್ಪ, ಸಂಘದ ಸದಸ್ಯರು ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here