ಎಲಿಮಲೆಯ ರಕ್ಷಾ ಎನ್.ಪಿ ಪಾವತಿಸಿದ ರೂ.1 ಸಾವಿರಕ್ಕೆ ಒಲಿದ ಬಂಪರ್ ಅದೃಷ್ಟ..!
ಪುತ್ತೂರು: ಬ್ರೈಟ್ ಭಾರತ್ ಸಂಸ್ಥೆ (Bright Bharat) ಹಮ್ಮಿಕೊಂಡಿರುವ ಉಳಿತಾಯ ಯೋಜನೆ ಸ್ಕೀಂ ಸೀಸನ್-2 ಇದರ ಪ್ರಥಮ ಡ್ರಾ.ಸೆ.13ರಂದು ನೆರವೇರಿದ್ದು ಸದಸ್ಯರ ಬಹು ನಿರೀಕ್ಷಿತ ಬಂಪರ್ ಬಹುಮಾನವಾಗಿರುವ ಅದೃಷ್ಟದ ಮನೆ ಸುಳ್ಯ ತಾಲೂಕಿನ ಎಲಿಮಲೆ ನಿವಾಸಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೂರ್ಣೇಶ್ ಅವರ ಪತ್ನಿ ರಕ್ಷಾ ಎನ್.ಪಿ ಪಾಲಾಗಿದೆ. ರಕ್ಷಾ ಎನ್.ಪಿ ಅವರು ರೂ ಒಂದು ಸಾವಿರ ಪಾವತಿಸಿದ್ದು ಅವರಿಗೆ ಬ್ರೈಟ್ ಭಾರತ್ ಸಂಸ್ಥೆ ವತಿಯಿಂದ 7275 ನಂಬರ್ ಸಿಕ್ಕಿತ್ತು. ಇದೀಗ ಗಣ್ಯರ ಸಮ್ಮುಖದಲ್ಲಿ ನಡೆದ ಡ್ರಾದಲ್ಲಿ ಅವರು ಸುಸಜ್ಜಿತ ಮನೆ ವಿಜೇತರಾಗಿದ್ದಾರೆ. ಅದೃಷ್ಟ ಡ್ರಾ ಮೂಲಕ ಮನೆ ಗೆದ್ದಿರುವ ರಕ್ಷಾ ಎನ್.ಪಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕಿರಣ್ ಆಲಂಕಾರು, ಬನ್ನತ್ ಶಾಂತಿಕೊಪ್ಪ, ಪುರುಷೋತ್ತಮ ಬಂಟ್ವಾಳ, ಯೋಗೀಶ್ ಮಂಗಳೂರು ಹಾಗೂ ಮುಸ್ತಾಕ್ ಕುತ್ತಾರ್ಪದವು ಮೊದಲಾದ ಐದು ಮಂದಿ ಆಕ್ಟಿವಾ ಬಹುಮಾನವಾಗಿ ಗೆದ್ದಿದ್ದಾರೆ. ಉಳಿದಂತೆ 25 ಮಂದಿ ಸರ್ಪ್ರೈಸ್ ಗಿಫ್ಟ್ ಗೆದ್ದುಕೊಂಡಿದ್ದಾರೆ. ಬ್ರೈಟ್ ಭಾರತ್ ಯೊಜನೆಯಲ್ಲಿ ಸದಸ್ಯರಾಗುವವರಿಗೆ ಅಕ್ಟೋಬರ್.13ರ ವರೆಗೆ ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ ಮೊ:8861623074, 9945508331 ನಂಬರನ್ನು ಸಂರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.