ಪುಣಚ ಕೋಟಿ-ಚೆನ್ನಯ ಬಿಲ್ಲವ ಸಂಘ ರಚನೆ

0

ಅಧ್ಯಕ್ಷ: ರಮೇಶ ಕೋಡಂದೂರು ,ಪ್ರ.ಕಾರ್ಯದರ್ಶಿ: ಜಗನ್ನಾಥ ಸಂಕೇಶ


ಪುಣಚ: ಕೋಟಿ ಚೆನ್ನಯ ಬಿಲ್ಲವ ಸಂಘ ಪುಣಚ ಇದರ ಮಹಾಸಭೆಯು ಸಂಘದ ಅಧ್ಯಕ್ಷ ರಾಮಕೃಷ್ಣ ಮೂಂಡಬೈಲುರವರ ಅಧ್ಯಕ್ಷತೆಯಲ್ಲಿ ಸೆ.15ರಂದು ಮಹಿಷಮರ್ದಿನಿ ದೇವಸ್ಥಾನದ ಬಳಿಯಲ್ಲಿ ನಡೆಯಿತು.


ಸಂಘದ ಪ್ರ.ಕಾರ್ಯದರ್ಶಿ ರವೀಂದ್ರ ಪೂಜಾರಿ ದಲ್ಕಾಜೆಗುತ್ತು ಸಂಘದ ವರದಿ ಮತ್ತು ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟರು.


ನೂತನ ಸಮಿತಿ ರಚನೆ:
ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ರಮೇಶ ಕೋಡಂದೂರು, ಪ್ರಧಾನ ಕಾರ್ಯದರ್ಶಿಯಾಗಿ ಜಗನ್ನಾಥ ಸಂಕೇಶ, ಉಪಾಧ್ಯಕ್ಷರಾಗಿ ಹರೀಶ ಪೊಯ್ಯಮೂಲೆ, ಉಪಕಾರ್ಯದರ್ಶಿಯಾಗಿ ಪ್ರವೀಣ ಆಜೇರು, ಕೋಶಾಧಿಕಾರಿಯಾಗಿ ಲೋಹಿತ್ ಅಜ್ಜಿನಡ್ಕ, ಗೌರವಾಧ್ಯಕ್ಷರಾಗಿ ನಾರಾಯಣ ಪೂಜಾರಿ ನೀರುಮಜಲು ಗರಡಿ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಮಾತನಾಡಿ ಬಿಲ್ಲವ ಸಂಘದ ಆಗು ಹೋಗುಗಳ ಬಗ್ಗೆ ತಿಳಿಸಿದರು. ಸಂಘದ ಗೌರವಾಧ್ಯಕ್ಷ ಶಿವಪ್ಪ ಪೂಜಾರಿ ನಾಟೆಕಲ್ಲು, ಗೌರವ ಸಲಹೆಗಾರ ವಿಶ್ವನಾಥ ಪೂಜಾರಿ ಕೂರೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಿದ್ವಿತ ಪ್ರಾರ್ಥಿಸಿದರು. ರವೀಂದ್ರ ಪೂಜಾರಿ ವಂದಿಸಿದರು. ಜಗನ್ನಾಥ ಸಂಕೇಶ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here