ಮುಕ್ರಂಪಾಡಿ: ಅಲ್ ಇಹ್ಸಾನ್ ಯಂಗ್‌ಮೆನ್ಸ್ ಅಸ್ತಿತ್ವಕ್ಕೆ-ಅಧ್ಯಕ್ಷರಾಗಿ ಇಬ್ಬತುಲ್ಲಾ, ಪ್ರ.ಕಾರ್ಯದರ್ಶಿ ಶಾಹಿಝ್ ಆಯ್ಕೆ

0

ಪುತ್ತೂರು: ಮಸ್ಜಿದುಲ್ ಜಾಮಿಯಾ ಅಬೂಬಕ್ಕರ್ ಸಿದ್ದಿಕ್ ಕಮಿಟಿ ಮುಕ್ರಂಪಾಡಿ ಇದರ ಅಧೀನದಲ್ಲಿ ಯುವಕ ಸಮಿತಿ ಅಲ್ ಇಹ್ಸಾನ್ ಯಂಗ್‌ಮೆನ್ಸ್ ರಚಿಸಲಾಯಿತು. ಕಮಿಟಿಯ ಹೆಸರು ಮತ್ತು ಲೋಗೋವನ್ನು ಮಸೀದಿಯ ಖತೀಬ್ ಸಿದ್ದಿಕ್ ಫೈಝಿ ಅನಾವರಣಗೊಳಿಸಿದರು.

ಸಮಿತಿಯ ಪ್ರಥಮ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಜಮಾಅತ್ ಅಧ್ಯಕ್ಷರಾದ ಮೊಹಮ್ಮದ್ ಶರೀಫ್ ಬಿ.ಎಂ ಅಧ್ಯಕ್ಷೆತೆಯಲ್ಲಿ ನಡೆಸಲಾಯಿತು. ಅಲ್ ಇಹ್ಸಾನ್ ಯಂಗ್‌ಮೆನ್ಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ಬತುಲ್ಲಾ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಾಹಿಝ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ತನ್ವಿರ್, ಜೊತೆ ಕಾರ್ಯದರ್ಶಿಯಾಗಿ ಜಹೀರ್, ಸಂಘಟನಾ ಕಾರ್ಯದರ್ಶಿಯಾಗಿ ಆದಿಲ್ ಶಾ, ಕೋಶಾಧಿಕಾರಿ ಯಾಗಿ ಸುಹೈಲ್‌ರವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸಲಹೆಗಾರರಾಗಿ ಶಾಕೀರ್, ಯಹ್ಯ, ಹಾರಿಸ್, ಖಾಲಿದ್‌ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here