ಅಮ್ಚಿನಡ್ಕ ಮುಖಾರಿಮೂಲೆ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ – ಕೃಷಿಗೆ ಹಾನಿ – ಅರಣ್ಯಾಧಿಕಾರಿಗಳಿಂದ ಪರಿಶೀಲನೆ

0

ಪುತ್ತೂರು: ಕಳೆದ ರಾತ್ರಿ ಅಮ್ಚಿನಡ್ಕದ ಮುಖಾರಿಮೂಲೆ ಎಂಬಲ್ಲಿಗೆ ಬಂದ ಕಾಡಾನೆಗಳು ಸ್ಥಳೀಯ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದೆ.

ಆನೆಗುಂಡಿ ರಕ್ಷಿತಾರಣ್ಯ ಮೂಲಕ ಅಮ್ಚಿನಡ್ಕದ ಮುಖಾರಿಮೂಲೆಗೆ ಬಂದ ಮೂರು ಕಾಡಾನೆಗಳು ಇಲ್ಲಿನ ಸ್ಥಳೀಯ ನಿವಾಸಿ ಅಬ್ದುಲ್‌ ರಝಾಕ್‌ ಮತ್ತು ಶರತ್‌ ಕುಮಾರ್‌ ರೈ ಎಂಬವರ ತೋಟಕ್ಕೆ ನುಗ್ಗಿದ್ದು ಕೃಷಿಗೆ ಹಾನಿ ಮಾಡಿದೆ ಎನ್ನಲಾಗಿದೆ. ಆನೆ ಈ ಭಾಗದಲ್ಲಿ ಕೃಷಿಗೆ ಹಾನಿ ಮಾಡಿರುವ ಸುದ್ದಿ ತಿಳಿಯುತ್ತಲೇ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಅರಣ್ಯಾ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆ ದಾಳಿ ಮತ್ತು ಕೃಷಿ ಹಾನಿಯ ಬಗ್ಗೆ ಪರಿಶೀಲನೆ, ಮಹಜರು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here