ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರದ ಮನ್‌ಕಿಬಾತ್ ವೀಕ್ಷಣೆ – ಪ್ರಮುಖ್‌ರಾಗಿ ಧನಂಜಯ ಗೌಡ ಪಟ್ಟೆ ಆಯ್ಕೆ

0

ಪುತ್ತೂರು: ಕೆದಂಬಾಡಿ ಬಿಜೆಪಿ ಶಕ್ತಿಕೇಂದ್ರದ ಮನ್ ಕಿ ಬಾತ್ ವೀಕ್ಷಣೆ ಪ್ರಮುಖ್‌ರಾಗಿ ಧನಂಜಯ ಗೌಡ ಪಟ್ಟೆ ಆಯ್ಕೆಯಾಗಿದ್ದಾರೆ. ನರೇಂದ್ರ ಮೋದಿಯವರ ಪ್ರಮುಖ ಕಾರ್ಯಕ್ರಮದಲ್ಲಿ ಒಂದಾದ ಮನ್ ಕೀ ಬಾತ್ ಕಾರ್ಯಕ್ರವವು ಪ್ರತಿ ತಿಂಗಳ ಕೊನೆಯ ಆದಿತ್ಯವಾರ ಬೆಳಿಗ್ಗೆ 11:೦೦ ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ದೇಶದ ಜನರನ್ನು ಉದ್ದೇಶಿಸಿ ಹಾಗೂ ಕೆಲವು ದೇಶದ ಆಗು ಹೋಗು ಮತ್ತು ಇತರ ಪ್ರಮುಖ ಅಂಶಗಳನ್ನು ಜನರ ಜೊತೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಯಾವ ವಿಚಾರದ ಬಗ್ಗೆ ಮಾತನಾಡಬೇಕು ಎಂಬ ಅಭಿಪ್ರಾಯವನ್ನು ತಿಳಿಸಲು ನಮೋ ಆಪ್ ಮೂಲಕ ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಪ್ರತೀ ಮನೆಯಲ್ಲೂ ವೀಕ್ಷಿಸಬೇಕೆನ್ನುವ ದೃಷ್ಟಿಯಿಂದ ಮತ್ತು ಇದರ ಮಾಹಿತಿ ಪ್ರತಿಯೊಬ್ಬರಿಗೂ ತಲುಪಿಸುವ ದೃಷ್ಟಿಯಿಂದ ಪ್ರತಿ ಬಿಜೆಪಿ ಶಕ್ತಿಕೇಂದ್ರಕ್ಕೆ ವೀಕ್ಷಣೆ ಪ್ರಮುಖರನ್ನು ಆಯ್ಕೆಮಾಡಲಾಗಿದೆ.

LEAVE A REPLY

Please enter your comment!
Please enter your name here