ಎ.ಯು. ಕ್ರಿಯೇಷನ್ಸ್-ಜಿಲ್ಲಾ ಪೊಲೀಸ್ ಘಟಕದಿಂದ ನಿರ್ಮಾಣಗೊಂಡ ಕಿರುಚಿತ್ರದ ಶಿರ್ಷಿಕೆ ಅನಾವರಣ-ಪೋಸ್ಟರ್ ಬಿಡುಗಡೆ

0

ಪುತ್ತೂರು: ಸಾಮಾಜಿಕ ಕಳಕಳಿಯೊಂದಿಗೆ ಎ.ಯು. ಕ್ರಿಯೇಷನ್ಸ್ ಹಾಗೂ ದ.ಕ. ಜಿಲ್ಲಾ ಪೊಲೀಸ್ ಘಟಕದ ಸಹಯೋಗದಡಿ ನಿರ್ಮಾಣಗೊಂಡ ಕಿರುಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪೋಸ್ಟರ್ ಬಿಡುಗಡೆಯನ್ನು ಉಪ್ಪಿನಂಗಡಿ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರು 34ನೇ ನೆಕ್ಕಿಲಾಡಿಯ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ, ಮೊಕ್ತೇಸರರಾದ ಯು.ಜಿ.ರಾಧ, ದಿವಾಕರ ಶೆಟ್ಟಿ ಕಾರ್ನೋಜಿ, ಅರ್ಚಕ ನಾಗರಾಜ ಭಟ್ ಕುಕ್ಕಿಲ, ತಲಕಾವೇರಿಯ ಅರ್ಚಕ ಸುಧೀರ್ ಟಿ.ಎಸ್.‌ ಚಿತ್ರತಂಡದ ಷಣ್ಮುಖ ಪ್ರಸಾದ್,ಗುರುಮೂರ್ತಿ ಅಮ್ಮಣ್ಣಾಯ, ರಾಜಶೇಖರ ಶಾಂತಿನಗರ, ಜಯರಾಮ್ ಆಚಾರ್ಯ, ಕಿಶೋರ್ ಕುಮಾರ್ ಜೋಗಿ ಶಾಂತಿನಗರ,
ಪ್ರಕಾಶ್ ಆಚಾರ್ಯ, ಚಂದ್ರಶೇಖರ್ ಶೆಟ್ಟಿ, ದಿವಾಕರ ಸೂರ್ಯ, ಕಥೆ,ಚಿತ್ರಕಥೆ,ಸಂಭಾಷಣೆ,ಸಂಕಲನ,ನಿರ್ದೇಶನ, ಪ್ರಚಾರ ಕಲೆ ಮಾಡಿರುವ ಅಚಲ್ ಉಬರಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here