ಮಹಾದೇವ ಮಿತ್ರ ಮಂಡಳಿ ಕಂಚಿಲ ಮಂಚಿ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಮಹಾದೇವ ಮಿತ್ರ ಮಂಡಳಿ ಕಂಚಿಲ ಮಂಚಿ ಇದರ ಮಹಾ ಸಭೆಯು ಶಾಂತಿನಗರದಲ್ಲಿ ನಡೆಯಿತು.

ಮಹಾಸಭೆಯಲ್ಲಿ ಲೆಕ್ಕ ಪತ್ರ ಮಂಡನೆ ನಡೆದು ಬಳಿಕ ಸಮಿತಿ ಸದಸ್ಯರು ತಮ್ಮ ಅನಿಸಿಕೆಯನ್ನ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಉದಯ ಕುಮಾರ್ ಕಂಚಿಲ, ಕಾರ್ಯದರ್ಶೀಯಾಗಿ ಲೋಹಿತ್ ಕುಮಾರ್ ಕಂಚಿಲ ಇವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ಆಯ್ಕೆ ಬಳಿಕ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಯಿತು. ಶ್ರೀ ಮಹಾದೇವ ಮಿತ್ರ ಮಂಡಳಿ(ರಿ.)ನ ಸರ್ವ ಸದಸ್ಯರು ಮಹಾಸಭೆಯಲ್ಲಿ ಉಪಸ್ಧಿತರಿದ್ದರು.

LEAVE A REPLY

Please enter your comment!
Please enter your name here