ಉಪ್ಪಿನಂಗಡಿ ದಡ್ಡುವಿನಲ್ಲಿ ಹೊಟೇಲ್ ಅತಿಥಿ ನವೀಕರಣಗೊಂಡು ಶುಭಾರಂಭ

0

ಉಪ್ಪಿನಂಗಡಿ: ಉಪ್ಪಿನಂಗಡಿ ಹಳೇಗೇಟು ದಡ್ಡುನಲ್ಲಿ ಹೊಟೇಲ್ ಅತಿಥಿ ಸಸ್ಯಹಾರಿ ಮತ್ತು ಮಾಂಸಹಾರಿ ಹೊಟೇಲ್ ನವೀಕರಣಗೊಂಡು ಅ.6ರಂದು ಬೆಳಿಗ್ಗೆ ಶುಭಾರಂಭಗೊಂಡಿತ್ತು.

ಪೆರ್ಲ ಶ್ರೀನಿವಾಸ ಬಡೆಕ್ಕಿಲ್ಲಾಯ ರವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆದ ಬಳಿಕ ಹೊಟೇಲ್ ಮಾಲಕರ ತಾಯಿ ಕಜೆಕ್ಕಾರು ಸುಲೋಚನಾ ಶೆಟ್ಟಿ ಯವರು ದೀಪ ಪ್ರಜ್ವಲನೆ ಮಾಡುವ ಮೂಲಕ ಅತಿಥಿ ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್ ಶುಭಾರಂಭಗೊಂಡಿತು. ಹೋಟೆಲ್ ನ ಮಾಲಕರಾದ ಕಜೆಕ್ಕಾರು ಬಾಲಕೃಷ್ಣ ಶೆಟ್ಟಿ ಯವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, ನಾವು ಉಪ್ಪಿನಂಗಡಿ ದಡ್ಡುವಿನಲ್ಲಿ ಹಲವು ವರ್ಷಗಳಿಂದ ಹೊಟೇಲ್ ಉದ್ಯಮವನ್ನು ನಡೆಸಿಕೊಂಡು ಬರುತ್ತಿದ್ದು ನಮ್ಮ ಹೋಟೆಲ್ ನಲ್ಲಿ ಸೌತ್ ಇಂಡಿಯನ್, ಚೈನೀಸ್‌, ಸಸ್ಯಹಾರಿ ಮತ್ತು ಮಾಂಸಹಾರಿ ಉತ್ತಮ ಗುಣಮಟ್ಟದ ಮೀನಿನ ಖಾದ್ಯಗಳು, ಚಿಕನ್ ಮತ್ತು ಮಟನ್ ಬಾಳೆ ಎಲೆ ಊಟಗಳು ದೊರೆಯುತ್ತದೆ. ಸಭೆ ಸಮಾರಂಭಗಳಿಗೆ ಉತ್ತಮ ಗುಣಮಟ್ಟದ ಕ್ಯಾಟರಿಂಗ್ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು ಎಂದು ತಿಳಿಸಿ ಗ್ರಾಹಕರು ಎಂದಿನಂತೆ ಸಹಕರಿಸುವಂತೆ ವಿನಂತಿಸಿದರು.

ಈ ಸಂಧರ್ಭದಲ್ಲಿ ಕದಿಕ್ಕಾರು ಬೀಡಿನ ಪ್ರವೀಣ್ ಕುಮಾರ್, ಪ್ರಮುಖರಾದ ವೆಂಕಪ್ಪ ಪೂಜಾರಿ ಮರುವೇಲು, ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ಧನಂಜಯ ನಟ್ಟಿಬೈಲು, ವಿಠ್ಠಲ ಶೆಟ್ಟಿ ಕಾಡಿಮಾರು, ಸಂಜೀವ ಶೆಟ್ಟಿ ಕಕ್ಕೆಪದವು, ಶೇಖರ ಶೆಟ್ಟಿ ವಾಮದಪದವು, ರಾಧಾಕೃಷ್ಣ ಶೆಟ್ಟಿ ಬೆಳ್ಳಾರೆ,ಅಣ್ಣಿ ಶೆಟ್ಟಿ ಕಜೆಕ್ಕಾರು, ಶೀನಪ್ಪ ಶೆಟ್ಟಿ ಸರಪ್ಪಾಡಿ, ಮಹಾಲಿಂಗ ಕಜೆಕ್ಕಾರು, ಸಚ್ಚಿದಾನಂದ ರೈ ಏಳ್ನಾಡುಗುತ್ತು, ಬಾಲಕೃಷ್ಣ ಶೆಟ್ಟಿ ಡೊಂಕೆಲ್ ಮಾರ್, ಸತೀಶ್ ಶೆಟ್ಟಿ ಕೆರ್ಪುಣಿ, ಪ್ರಸಾದ್ ಶೆಟ್ಟಿ ಕೆರ್ಪುಣಿ,ರಾಜೇಶ್ ಶೆಟ್ಟಿ ಕೆರ್ಪುಣಿ, ನರಸಿಂಹ ಶೆಟ್ಟಿ ಕಜೆಕ್ಕಾರು, ವಸಂತ ಕುಕ್ಕೇಶ್ರೀ, ರಾಜೇಶ್ ಇಲೆಕ್ಟೀಕಲ್ಸ್ ನ ಮಾಲಕರಾದ ರಾಜೇಶ್ ಶೆಟ್ಟಿ ಸಂಪ್ಯಾಡಿ, ಬಿ.ಕೃಷ್ಣಪ್ಪ ಬೆದ್ರೊಡಿ, ಮೋಹನದಾಸ ಶೆಟ್ಟಿ ಕಜೆಕ್ಕಾರು,ಪುರಂದರ ಶೆಟ್ಟಿ ಕಜೆಕ್ಕಾರು ಸೇರಿದಂತೆ ಹಲವು ಮಂದಿ ಅಗಮಿಸಿ ಶುಭಹಾರೈಸಿದರು. ಹೋಟೆಲ್ ಮಾಲಕರಾದ ಕಜೆಕ್ಕಾರು ಬಾಲಕೃಷ್ಣ ಶೆಟ್ಟಿಯವರ ಸಹೋದರರಾದ ಸುರೇಶ್ ಶೆಟ್ಟಿ, ಹರೀಶ್ ಶೆಟ್ಟಿ,ಉಮೇಶ ಶೆಟ್ಟಿ ,ಚಂದ್ರಹಾಸ ಶೆಟ್ಟಿ, ಅತಿಥಿಗಳನ್ನು ಸ್ವಾಗತಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here