“ತೆನ್ಕಾಯಿ ಮಲೆ” ಕನ್ನಡ ಕಿರುಚಿತ್ರದ ಶೀರ್ಷಿಕೆ,,ಟೀಸರ್‌ ಪ್ರೋಮೋ ಬಿಡುಗಡೆ

0

ಅಜ್ಜನ ಮಾಯೆ ಕಿರುಚಿತ್ರ ಖ್ಯಾತಿಯ ರವಿಚಂದ್ರ ರೈ ಮುಂಡೂರು ಅವರ ಕಥೆ – ಚಿತ್ರಕಥೆ – ಸಂಭಾಷಣೆ ,ನಿರ್ದೇಶನ

ಪುತ್ತೂರು: Inspire ಫಿಲಮ್ಸ್ ನವರ ಅಜ್ಜನ ಮಾಯೆ ಕಿರುಚಿತ್ರ ಖ್ಯಾತಿಯ ರವಿಚಂದ್ರ ರೈ ಮುಂಡೂರು ಕಥೆ – ಚಿತ್ರಕಥೆ – ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕುತೂಹಲ ಭರಿತ ಹೊಚ್ಚ ಹೊಸ “ತೆನ್ಕಾಯಿ ಮಲೆ” ಕನ್ನಡ ಕಿರುಚಿತ್ರದ Title Launch ಹಾಗು Teaser Promo – ವಿಜಯ ಸಾಮ್ರಾಟ್ ಪುತ್ತೂರು (ರಿ.), ಇದರ ಸಹಜ್ ರೈ ನೇತೃತ್ವದ “ಪುತ್ತೂರುದ ಪಿಲಿಗೊಬ್ಬು 2024ರ” ವೇದಿಕೆಯಲ್ಲಿ ಅ.6ರಂದು ಅದ್ದೂರಿಯಾಗಿ ಬಿಡುಗಡೆಗೊಂಡಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪ್ರಸನ್ನ ರೈ ಎಸ್., ಸುಶಾಂತ್ ಆಚಾರ್ಯ ಮರೀಲ್, ಅಭಿಲಾಷ ಮಾರ್ಥ ಬೆಳ್ಳಿಪ್ಪಾಡಿ, ಷಣ್ಮುಖ ಪ್ರಸಾದ್ ಉಪ್ಪಿನಂಗಡಿ, ಜಗದೀಶ್ ಶೆಟ್ಟಿ, ಪ್ರವೀಣ್ ಕುಮಾರ್, ದೇವಿದಾಸ್ ಕುರಿಯ, ಕೀರ್ತನ್ ಶೆಟ್ಟಿ ಸುಳ್ಯ, ಶ್ರೇಯ ಸುಳ್ಯ, ವೆಂಕಪ್ಪ ಬರೆಪ್ಪಾಡಿ, ಉಮೇಶ್ ಎಸ್.ಕೆ., ಸತೀಶ್ ಆಚಾರ್ಯ, ಜ್ಯೋತಿ ಕುಲಾಲ್, ಪ್ರಜ್ವಲ್ ಶೆಟ್ಟಿ ಸಾಗು, ಅಮೃತ್ ರೈ, ವಿ.ಜೆ. ವಿಖ್ಯಾತ್, ವಿ.ಜೆ. ಅನುರಾಗ್, ಪೃತ್ವಿರಾಜ್ ರೈ ಸೊರಕೆ, ಶ್ರೀನಿಧಿ ರೈ ಮಾಡಾವು, ಹಾಗೂ ಚಿತ್ರದ ನಿರ್ದೇಶಕ ರವಿಚಂದ್ರ ರೈ ಮುಂಡೂರು ಉಪಸ್ಥಿತರಿದ್ದರು.

ಈ ಚಿತ್ರದಲ್ಲಿ ತುಳುನಾಡಿನ ದಿಗ್ಗಜ ನಟರಾದ ಚೇತನ್ ರೈ ಮಾಣಿ ಹಾಗೂ ದೀಪಕ್ ರೈ ಪಾಣಾಜೆ ಅಭಿನಯಿಸುತ್ತಿದ್ದಾರೆ. ಇವರೊಂದಿಗೆ ವಿ.ಜೆ. ವಿಖ್ಯಾತ್ ಹಾಗೂ ಶ್ರೇಯ ಸುಳ್ಯ ಹಾಗೂ 15 ಕ್ಕೂ ಹೆಚ್ಚು ಕಲಾವಿದರು ಅಭಿನಯಿಸುತ್ತಿದ್ದಾರೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ.

ಈ ಚಿತ್ರಕ್ಕೆ ಷಣ್ಮುಖ ಪ್ರಸಾದ್ ಉಪ್ಪಿನಂಗಡಿಯವರ ಛಾಯಾಗ್ರಹಣ ಇದ್ದು, ಪ್ರಜ್ವಲ್ ಶೆಟ್ಟಿ ಅವರ ಡ್ರೋಣ್, ವಿಶ್ವಜಿತ್ ಉಳಿಯ ಅವರ VFX ಹಾಗೂ ಸಂಕಲನ, ಸವಿ ಸಂಗೀತದ ಅಶ್ವಿನ್ ಇವರ Music, ಪ್ರಸನ್ನ ರೈ ಎಸ್. – Reflections ಇವರ Art, ಮತ್ತು ಕೀರ್ತನ್ ಶೆಟ್ಟಿ ಸುಳ್ಯ, ಹಾಗೂ ಹೃದಯ್ ಬೈರೆತ್ತಿರ ರವರ ಸಹ-ನಿರ್ದೇಶನ ವಿರುತ್ತದೆ.

ಇದರ Teaser Promo ವಿ.ಜೆ. ವಿಖ್ಯಾತ್ You Tube Channel ನಲ್ಲಿ ಬಿಡುಗಡೆಗೊಂಡಿದೆ.

LEAVE A REPLY

Please enter your comment!
Please enter your name here