ಅಂತಾರಾಷ್ಟ್ರೀಯ ಕ್ರೀಡಾಪಟು ತಿಲಕ ನವೀನ್ ಅವರಿಗೆ ಸೀತಾರಾಮ ರೈಯವರಿಂದ ಗೌರವರ್ಪಣೆ

0

ಪುತ್ತೂರು: ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಿಲಕ ನವೀನ್ ಅರ್ತಾಜೆ ಸೋಣoಗೀರಿ ಇವರು ಹಿರಿಯರ ಕ್ರೀಡಾಕೂಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ 2024ನೇ ಅಕ್ಟೋಬರ್ ತಿಂಗಳ 11ರಿಂದ 13 ತಾರೀಕಿನ ವರೆಗೆ ಬುಕಿಟ್ ಜಲೀಲ್ ಸ್ಟೇಡಿಯಂ ಮಲೇಷಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವರನ್ನು ಸವಣೂರು‌ ರಶ್ಮಿ ನಿವಾಸದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸೀತಾರಾಮ ರೈ ಸವಣೂರು ಕ್ರೀಡಾ ಪ್ರತಿಭೆ ತಿಲಕ ಗೆದ್ದು ಬನ್ನಿ, ಭಾರತಕ್ಕೆ ಹಾಗೂ ಹುಟ್ಟೂರಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿ, ಗೌರವಿಸಿದರು. ಕಸ್ತೂರಿಕಲಾ ಎಸ್ ರೈ, ರಶ್ಮಿ ಅಶ್ವಿನ್ ಶೆಟ್ಟಿ ಹಾಗೂ ಕುಸುಮ ಪಿ.ಶೆಟ್ಟಿ ಕೆರೆಕೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here