ಹಿಂಜಾವೇ ತಾಲೂಕು ಪದಾಧಿಕಾರಿಗಳ ನೇಮಕ

0

ಪುತ್ತೂರು: ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕಿನ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಜಲ್ಲಾ ಸಂಯೋಜಕ ಮೋಹನ್‌ದಾಸ್ ಕಾಣಿಯೂರು ಅವರು ತಿಳಿಸಿದ್ದಾರೆ. ಅ.5ರಂದು ಸಂಘದ ಕಾರ್ಯಾಲಯ ಪುತ್ತೂರು ಪಂಚವಟಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಅವರು ಘೋಷಣೆ ಮಾಡಿದ್ದಾರೆ.


ತಾಲೂಕು ಸಂಯೋಜಕರಾಗಿ ಕೀರ್ತನ್ ಸವಣೂರು, ಸಹ ಸಂಯೋಜಕರಾಗಿ ಶಿವಪ್ರಸಾದ್ ಶಾಂತಿಗೋಡು, ಅನಂತ್ ಈಶ್ವರಮಂಗಲ, ತಾಲೂಕು ಕಾರ್ಯಕಾರಿಣಿ ಸದಸ್ಯರುಗಳಾಗಿ ಮನೀಶ್ ಬಿರ್ವ, ಜಯಪ್ರಕಾಶ್ ಮುಂಡೂರು, ಲೋಕನಾಥ ಭಂಡಾರಿ, ತೇಜಸ್ ಸವಣೂರು, ದಯಾನಂದ ಚಾರ್ವಾಕ, ಶ್ರೀಧರ ಇದ್ಯಾಡಿ, ಭವಿತ್ ಕುರಿಯ, ಸುಭಾಷ್ ಮುಕ್ವೆ ಮನೋಜ್ ಕಾಣಿಯೂರು, ದೀಪಕ್ ಮುಂಡ್ಯ, ಜಗನ್ನಾಥ ಅನಿಲೆ, ಶ್ರೀಕಾಂತ್ ಬೆಳ್ಳಿಪ್ಪಾಡಿ, ಪ್ರಸಾದ್ ಪುರುಷರ ಕಟ್ಟೆ, ಕಿರಣ್ ಬೆದ್ರಾಳ, ಶೇಖರ್ ಬನ್ನೂರು, ಗೀತೆಶ್ ಅನಿಲೆ, ರಮೇಶ್ ಮುಂಡೂರು, ಚೈತ್ರೆಶ್ ಪುರುಷರಕಟ್ಟೆ, ಮೋಹನ್ ಆರ್ಲಪದವು, ಕೀರ್ತಿಶ್ ಮುಕ್ವೆ, ಧೀರಜ್. ಟಿ, ಚೆನ್ನಪ್ಪ, ಸಂತೋಷ್ ಬಿ ಕೆ, ಸಂದೀಪ್ ಮುಂಡೂರು, ಕಮಲಾಕ್ಷ ಕೆ, ಮನೋಜ್ ಕುಮಾರ್, ಸುಧೀಂದ್ರ, ಹೇಮಂತ್, ದೀಪಕ್, ಭವಿತ್, ಕೌಶಿಕ್, ತೇಜಸ್ ಮನೋಜ್ ಕುಮಾರ, ವಾಸುದೇವ ಮುಂಡೂರು ರವರುಗಳನ್ನು ನೇಮಿಸಲಾಗಿದೆ. ಕಾರ್ಯಕರ್ತರ ಸಭೆಯಲ್ಲಿ ಪ್ರಾಂತದ ಪ್ರಮುಖರಾದ ಪ್ರಶಾಂತ್ ಬಂದ್ಯೋಡು, ರವಿರಾಜ್ ಶೆಟ್ಟಿ ಕಡಬ, ಹರೀಶ್ ಮಂಗಳೂರು, ಪ್ರಶಾಂತ್ ಬಂಟ್ವಾಳ, ಜಿಲ್ಲಾ ಪ್ರಮುಖರಾದ ದಿನೇಶ್ ಪಂಜಿಗ, ಭರತ್ ಈಶ್ವರಮಂಗಲ, ಅನುಪ್ ಆಳ್ವ ಸೇರಿದಂತೆ ಪುತ್ತೂರು ತಾಲೂಕಿನ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here