ನೇರಳಕಟ್ಟೆ: ಅನಾರೋಗ್ಯದಿಂದ ವ್ಯಕ್ತಿಯ ಸಾವು -ಮೃತದೇಹ ನೋಡಿ ಬಂದ ನೆರೆಮನೆ ವಾಸಿ ಹೃದಯಾಘಾತಕ್ಕೆ ಬಲಿ

0

ವಿಟ್ಲ : ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಸಮೀಪದ ಭಗವಂತಕೋಡಿ ಎದುರು – ಬದುರು ಮನೆಯ ನಿವಾಸಿಗಳಿಬ್ಬರು ಅ.10ರಂದು ಬೆಳಗ್ಗೆ ನಿಧನರಾದ ಘಟನೆ ನಡೆದಿದೆ.


ಅಬ್ದುರ್ರಹ್ಮಾನ್ ಮೇಸ್ತ್ರಿ(54 ವ.) ರವರು ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರ ಮೃತದೇಹವನ್ನು ನೋಡಿ ಸ್ವಗೃಹಕ್ಕೆ ಬಂದಿದ್ದ ಎದುರು ಮನೆಯ ಹನೀಫ್ ಸಾಹೇಬ್ (65 ವ.)ರವರು ಕೆಲವೇ ಹೊತ್ತಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.


ಅಬ್ದುರ್ರಹ್ಮಾನ್ ಮೇಸ್ತ್ರಿ ಅವರು ಮೂಲತಃ ವಿಟ್ಲ ಸಮೀಪದ ಒಕ್ಕೆತ್ತೂರು – ಕೊಡಂಗೆ ನಿವಾಸಿಯಾಗಿದ್ದು ಇತ್ತೀಚೆಗೆ ಭಗವಂತಕೋಡಿ ಯಲ್ಲಿ ಮನೆ ಖರೀದಿಸಿ ವಾಸವಾಗಿದ್ದರು. ಅವರ ಮೃತ ದೇಹವನ್ನು ಒಕ್ಕೆತ್ತೂರು – ಕೊಡಂಗೆ ಮಸೀದಿ ಬಳಿ ದಫನ ಕಾರ್ಯ ನೆರವೇರಿಸಲಾಗಿದೆ.ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಹನೀಫ್ ಸಾಹೇಬ್ ಅವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here