ಕಡಬ: ಎಲ್.ಐ.ಸಿ ಬಂಟ್ವಾಳ ಶಾಖೆಯ ಅಭಿವೃಧ್ದಿ ಅಧಿಕಾರಿ ನಾರಾಯಣ ಎನ್ ಕೊಲ್ಲಿಮಾರು ಬಲ್ಯ ಇವರ ವೃತ್ತಿ ಬದುಕಿನ ಬೆಳ್ಳಿ ಹಬ್ಬ ಪ್ರಯುಕ್ತ “ನಾರಾಯಣ ಬಲ್ಯ ರಜತ ಸಂಭ್ರಮೋತ್ಸವ ಡಿ.25ರಂದು ಬಲ್ಯ ಕೊಲ್ಲಿಮಾರು ಸೌಪರ್ಣಿಕಾ ತರವಾಡು ಮನೆಯಲ್ಲಿ ಬೆಳಿಗ್ಗೆ ಗಂಟೆ 6ರಿಂದ ರಾತ್ರಿ ಗಂಟೆ 12.30ರ ವರೆಗೆ ನಡೆಯಲಿದೆ.

ರಜತ ಸಂಭ್ರಮೋತ್ಸವ ಪ್ರಯುಕ್ತ ಶ್ರೀ ಸಬ್ಬಮ್ಮ ದೇವಿಗೆ ಪೂಜೆ, ಭಜನಾ ಕಾರ್ಯಕ್ರಮ, ಸ್ಯಾಕ್ಸ್ ಫೋನ್ ಜೊತೆಗೆ ಕುಣಿತ ಚೆಂಡೆ ವಾದನ, 20 ತಂಡಗಳಿಂದ ಏಕಕಾಲದಲ್ಲಿ ಕುಣಿತ ಭಜನೆ, ವಿಶೇಷ ಫೋಟೋ ಕ್ಲಿಪ್ಪಿಂಗ್, ಹಾಸ್ಯ ಸಂಗೀತ, ನೃತ್ಯ, ಮ್ಯಾಜಿಕ್, ಯೋಗ ಪ್ರದರ್ಶನ, ಸಭಾ ಕಾರ್ಯಕ್ರಮ, ಸನ್ಮಾನ, “ಬೆಳ್ಳಿದೀಪ” ಸ್ಮರಣ ಸಂಚಿಕೆ ಬಿಡುಗಡೆ, ಕೊಡುಗೆ ವಿತರಣೆ ಹಾಗೂ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ನಾರಾಯಣ ಎನ್ ಕೊಲ್ಲಿಮಾರು ಬಲ್ಯ ತಿಳಿಸಿದ್ದಾರೆ.