ಅರಿಯಡ್ಕ: ಅರಿಯಡ್ಕ ಗ್ರಾಮ ದೈವ ಧೂಮಾವತಿ ಕ್ಷೇತ್ರದಲ್ಲಿ ಡಿ.25 ರಂದು ಜನವರಿ 23 ರಂದು ಗ್ರಾಮ ದೈವ ವಠಾರದಲ್ಲಿ ಗ್ರಾಮ ದೈವ ಧೂಮಾವತಿ ಮತ್ತು ಶ್ರೀ ರಕ್ತೇಶ್ವರಿ ದೈವಸ್ಥಾನದ ಪುನಃ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ನಡೆಯಲಿರುವ ಗ್ರಾಮ ದೈವ ಧೂಮಾವತಿ, ಶ್ರೀ ರಕ್ತೇಶ್ವರಿ ಮತ್ತು ಶ್ರೀ ವ್ಯಾಘ್ರ ಚಾಮುಂಡಿ ದೈವ ಹಾಗೂ ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುತ್ಯಾಡಿ ಶ್ರೀ ಹರಿ ಭಟ್, ಶಮನ್ ಭಟ್ ಕುತ್ಯಾಡಿ,ಕ್ಷೇತ್ರದ ಪ್ರಧಾನ ಕರ್ಮಿ ಸದಾಶಿವ ಮಣಿಯಾಣಿ ಕುತ್ಯಾಡಿ, ಬಾಲಕೃಷ್ಣ ಮಣಿಯಾಣಿ ಕುತ್ಯಾಡಿ, ಹರೀಶ್ ಮಣಿಯಾಣಿ ಕುತ್ಯಾಡಿ, ಸಂದೇಶ್ ಮಣಿಯಾಣಿ ಕುತ್ಯಾಡಿ,ಭಾರ್ಗವ್ ರೈ ಕುತ್ಯಾಡಿ, ಮೋಹನ ಮಣಿಯಾಣಿ ಕುತ್ಯಾಡಿ, ಆನಂದ ನಾಯ್ಕ ಬಳ್ಳಿ ಕಾನ ಮತ್ತಿತರರು ಉಪಸ್ಥಿತರಿದ್ದರು.