ಕೆಯ್ಯೂರು 34ನೇ ವರ್ಷದ ಏಕಾಹ ಭಜನಾ ಮಂಗಳೋತ್ಸವ ಸಂಪನ್ನ

0

ಕೆಯ್ಯೂರು: ಶ್ರೀ ದುರ್ಗಾಭಜನಾ ಮಂಡಳಿ, ಕೆಯ್ಯೂರು ಇದರ ವತಿಯಿಂದ ನಡೆಯುವ 34ನೇ ವರ್ಷದ ನಗರ ಭಜನೆಯು ನ.24ರಂದು ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಿ ಸನ್ನಿದಿಯಿಂದ ಪ್ರಾರಂಭಗೊಂಡು ಜ.31ರ ತನಕ 69ದಿನಗಳ ಪರ್ಯಂತ ರಾತ್ರಿ ನಗರ ಭಜನೆಯು ನಡೆದು ಫೆ.2ರಂದು ಏಕಾಹ ಭಜನಾ ಮಂಗಳೋತ್ಸವವು ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಿತು.

ದೇವಳದ ಪ್ರಧಾನ ಆರ್ಚಕ ಶ್ರೀನಿವಾಸರಾವ್ ವೈದಿಕ ವಿಧಿ ನೇರವೇರಿಸಿ. ಏಕಾಹ ಭಜನಾ ಮಂಗಳೋತ್ಸವವನ್ನು ಸಮಾಪ್ತಿಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಆಡಳಿತ ಅಧಿಕಾರಿ ನಮಿತಾ ಎ.ಕೆ ,  ಶ್ರೀ ಕ್ಷೇತ್ರದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಶಶಿಧರ ರಾವ್ ಬೊಳಿಕಲ, ಮತ್ತು ಸದಸ್ಯರು ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು, ಪದಾಧಿಕಾರಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.

69 ದಿನಗಳ ಕಾಲ ರಾತ್ರಿ ನಡೆದ ನಗರ ಭಜನಾ ಕಾರ್ಯಕ್ರಮದಲ್ಲಿ ನಿತ್ಯ ಅರ್ಚಕರಾಗಿ ಸಹಕರಿಸಿದ ಮಹೇಶ್ ಭಟ್ ಕಜೆಮೂಲೆ ಮತ್ತು ಮಧುಸೂದನ್ ಭಟ್ ಕಜೆಮೂಲೆ ಇವರನ್ನು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸಲಾಯಿತು. ಏಕಾಹ ಭಜನಾ ಕಾರ್ಯಕ್ರಮದಲ್ಲಿ ಒಟ್ಟು 18 ತಂಡಗಳು ಭಾಗವಹಿಸಿ ಶ್ರೀ ದೇವರ ನಾಮ ಸಂಕೀರ್ತನೆಯಲ್ಲಿ ಪಾಲ್ಗೊಂಡು ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು.

ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿ ಅಧ್ಯಕ್ಷ 69 ದಿನಗಳ ಕಾಲ ನಡೆದ ನಗರ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಪದಾಧಿಕಾರಿಗಳು,ಅರ್ಚಕವೃಂದ, ನೌಕರ ವೃಂದ,  ಭಕ್ತಾದಿಗಳಿಗೆ, ಊರ ಹತ್ತು ಸಮಸ್ತರಿಗೆ, ಹೃತ್ಪೂರ್ವಕ‌  ಕೃತಜ್ಞತೆ ಸಲ್ಲಿಸಿ, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಅಧ್ಯಕ್ಷ ದೇವಣ್ಣ ನಾಯ್ಕ ಧನ್ಯವಾದ ಸಲ್ಲಿಸಿದರು. ದೇವಾಲಯ ಭಕ್ತರು ನೀಡಿದ ಹೂವಿನಿಂದ ಅಲಂಕಾರಗೊಂಡಿತ್ತು, ರಾತ್ರಿ ಸುಡುಮದ್ದು ಪ್ರದರ್ಶನ ಕಾರ್ಯಕ್ರಮ ನಡೆಯಿತು. 

LEAVE A REPLY

Please enter your comment!
Please enter your name here