ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿಯ ವಿದ್ಯಾರ್ಥಿಗಳು ಚಿತ್ರದುರ್ಗದ ನವೋದಯ ಸಂಸ್ಥೆ ಸಂಘಟಿಸಿರುವ ಅಂತರಾಷ್ಟ್ರೀಯ ಮಟ್ಟದ ಕನ್ನಡ ಪರೀಕ್ಷೆಯಲ್ಲಿ ಪಿಲಾತಬೆಟ್ಟು ನಿವಾಸಿ ನಾಗೇಶ ಹೆಗ್ಡೆ ಮತ್ತು ಹೇಮಲತಾ ದಂಪತಿಯ ಪುತ್ರಿಯಾದ ಮೂರನೇ ತರಗತಿಯ ಸ್ನೇಹಾ ರಾಜ್ಯ ಮಟ್ಟದಲ್ಲಿ ಪ್ರಥಮ, ಇರ್ವತ್ತೂರು ನಿವಾಸಿ ಸಾದಿಕ್ ಮತ್ತು ರಝೀಯಾ ಎಸ್.ಪಿ ದಂಪತಿಯ ಪುತ್ರಿಯಾದ ಏಳನೇ ತರಗತಿಯ ಅಫ್ರಾ ರಿಂಷಾ,ಕಾಡಬೆಟ್ಟು ನಿವಾಸಿ ಎಂ.ಕೆ.ಮೋಹನ ಮಡಿವಾಳ ಮತ್ತು ಸುಮತಿ ದಂಪತಿಯ ಪುತ್ರನಾದ ಆರನೇ ತರಗತಿಯ ಜೀವನ್ ಎಂ.ಕೆ ,ಸೇವಾ ನಿವಾಸಿ ಜಗದೀಶ ಮತ್ತು ಅರುಂಧತಿ ರವರ ಪುತ್ರಿಯಾದ ಐದನೇ ತರಗತಿಯ ಮಾನ್ವಿ ಶೆಟ್ಟಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಭಾಗವಹಿಸಿದ ಇತರ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಶೀಲ್ಡ್ ಪಡೆದಿರುತ್ತಾರೆ. ಬುರೂಜ್ ಶಾಲೆ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಉತ್ತಮ ಮುಖ್ಯ ಶಿಕ್ಷಕಿ ಮತ್ತು ಉತ್ತಮ ಸಂಘಟಕ ಪ್ರಶಸ್ತಿಯು ಲಭಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವೃಂದ ಆಡಳಿತ ಮಂಡಳಿ,ಪೊಷಕರು ಶ್ಲಾಘಿಸಿದ್ದಾರೆ.