ನಾಳೆ(ಫೆ.23): ಅಜ್ಜಿಕಲ್ಲು ಶಾಲಾ ವಠಾರದಲ್ಲಿ ಧರ್ಮಸ್ಥಳ ಒಕ್ಕೂಟದ ಸದಸ್ಯರ ಕುಸಾಲ್ದ ಗೊಬ್ಬುಲು

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಇದರ ಬೆಟ್ಟಂಪಾಡಿ ವಲಯದ ಅಜ್ಜಿಕಲ್ಲು ಒಕ್ಕೂಟದ ಸದಸ್ಯರಿಗಾಗಿ ಕುಸಾಲ್ದ ಗೊಬ್ಬುಲು-2025 ಫೆ.23ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ಅಜ್ಜಿಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಲಿದೆ. ಒಕ್ಕೂಟದ ಸದಸ್ಯರಿಗಾಗಿ ನಡೆಯುವ ಈ ಕ್ರೀಡಾಕೂಟದಲ್ಲಿ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಅಥವಾ ಲಕ್ಕಿಗೇಮ್, ತೆಂಗಿನಕಾಯಿಗೆ ಗುರಿ ಇಡುವುದು, ಬಾಲ್ ಬಕೆಟ್, ಬಾಟಲಿಗೆ ನೀರು ತುಂಬಿಸುವುದು ಇತ್ಯಾದಿ ಕುಸಾಲ್ದ ಗೊಬ್ಬುಲು ನಡೆಯಲಿದೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ಒಕ್ಕೂಟದ ಸದಸ್ಯರಿಗೆ ಮನೋರಂಜನೆಗಾಗಿ ಏರ್ಪಡಿಸಲಾಗಿರುವ ಈ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ಸದಸ್ಯರೂ ಭಾಗವಹಿಸುವಂತೆ ಅಜ್ಜಿಕಲ್ಲು ಒಕ್ಕೂಟದ ಅಧ್ಯಕ್ಷೆ ಸರೋಜ ಅಜ್ಜಿಕಲ್ಲು ಮತ್ತು ಪದಾಧಿಕಾರಿಗಳು ಹಾಗೂ ಯೋಜನೆಯ ಸೇವಾ ಪ್ರತಿನಿಧಿ ತ್ರಿವೇಣಿ ಪಲ್ಲತ್ತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here