
ಕಡಬ: ಭಾರತದ ಪ್ರಖ್ಯಾತ ಉರಗ ತಜ್ಞ ವಾವಾ ಸುರೇಶ್ ಗೆ ಕಡಬದ ಪಿಲ್ಯ ಪ್ಯಾಶನ್ ಹಾಗೂ ಪಿಲ್ಯ ಮ್ಯಾಚಿಂಗ್ ಸೆಂಟರ್ ವತಿಯಿಂದ ಸನ್ಮಾನ ಕಾರ್ಯಕ್ರಮ ಮಾ.5ರಂದು ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಥೊಮಸ್ ಇಡಯಾಲ್, ಹಿರಿಯರಾದ ರಾಮ್ ಭಟ್, ಸಾದಿಕ್ ಝೂಬಿ ಗೋಲ್ಡ್, ಸುಮಾ ದಡ್ಡು, ಸಮದ್ ನೆಕ್ಕಿತ್ತಡ್ಕ, ಶರತ್ ಪೂಜಾರಿ, ತ್ವಲ್ಲತ್ ಮರ್ದಾಳ, ಮೀನಾ ಕೋರಿಯಾರ್, ಅಸ್ಮಾ, ರಶೀನಾ ಡಿ, ಹಾಗೂ ಇತರರು ಉಪಸ್ಥಿತಿಯಿದ್ದರು. ರಶೀದ್ ಪಿಲ್ಯ ಸ್ವಾಗತಿಸಿ ಫಾರೂಕ್ ಪಿಲ್ಯ ವಂದಿಸಿದರು.
