ಕುಂಬ್ರ: ನಂದಿ ರಥಯಾತ್ರೆಗೆ ಕುಂಬ್ರದಲ್ಲಿ ಅದ್ಧೂರಿ ಸ್ವಾಗತ 

0

ಪುತ್ತೂರು: ಗೋ ಸೇವಾ ಗತಿವಿಧಿ ಕರ್ನಾಟಕ ಇವರು ಆಯೋಜಿಸಿದ ನಂದಿ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸಿ ಸುಳ್ಯದಿಂದ ಪುತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ರಥಯಾತ್ರೆಯನ್ನು ಕುಂಬ್ರದಲ್ಲಿ  ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಕೈಕಾರ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಟೆಲಿಕಾಂ ಸಲಹಾ ಸಮಿತಿ ಸದಸ್ಯರಾದ ನಿತೀಶ್ ಕುಮಾರ್ ಶಾಂತಿವನ, ನೆಟ್ಟಣಿಗೆ ಮುಡ್ನೂರು ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ , ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರಾದ ಉಷಾ ನಾರಾಯಣ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಶಿವರಾಮಗೌಡ ಬೊಳ್ಳಾಡಿ, ಶ್ರೀನಿವಾಸ ಮುಡಾಲ , ರಾಜೀವಿ ಎಸ್ ಶೆಟ್ಟಿ, ಬಿಜೆಪಿ ಬೂತ್ ಅಧ್ಯಕ್ಷ ಅರುಣ್ ರೈ ಬಿಜಳ, ತಾರನಾಥ ಶೆಟ್ಟಿ ಮುಡಾಲ, ಸಂಜೀವ ಬೊಳ್ಳಾಡಿ, ರಾಜಕಿರಣ್, ಹರೀಶ್ ಕೌಡಿಚಾರ್, ಕುಮಾರ್ ಶೇಖಮಲೆ, ಪಂಚಾಯತ್ ಸದಸ್ಯರಾದ ಪ್ರದೀಪ್ ಎಸ್ , ಮಹೇಶ್ ಕೇರಿ , ಮೇಘರಾಜ್ ಮುಡಾಲ, ಶ್ರೀದೀಪ್ ಅಜಲಡ್ಕ, ಸ್ನೇಹ ಮಹಿಳಾ ಮಂಡಲ ಅಧ್ಯಕ್ಷೆ ಪ್ರಮೀಳಾ, ಸದಸ್ಯೆ ಸಾವಿತ್ರಿ, ರಾಜೀವಿ ಸೇರಿದಂತೆ ಸಂಘ ಪರಿವಾರದ ವಿವಿಧ ಕ್ಷೇತ್ರದ ಜವಾಬ್ದಾರಿ ಹೊತ್ತ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here