ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಯು. ಡಿ ಐಡಿ ವಿಕಲ ಚೇತನರ ಪ್ರಮಾಣ ಪತ್ರ ಶಿಬಿರ ಮಾ.28ರಂದು ನಡೆಯಿತು.
ಆಡಳಿತ ವೈದ್ಯಾಧಿಕಾರಿ ಆಶಾ ಜ್ಯೋತಿ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ದೀಪಕ್. ರೈ ವಿಕಲ ಚೇತನರ ನೋಡೆಲ್ ಅಧಿಕಾರಿ ವನಿತಾ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಬಹುಮಟ್ಟದ ಪುನರ್ವಸತಿ ಕಾರ್ಯಕರ್ತರಾದ ನವೀನ್ ಕುಮಾರ್ ರವರ ಉಪಸ್ಥಿತಿಯಲ್ಲಿ ನಡೆಯಿತು.
ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ಕೀಲು ತಜ್ಞರಾದ ಡಾಕ್ಟರ್ ಅಜಯ್ ಎಂ. ಬಿ, ಹಿರಿಯ ತಜ್ಞರಾದ ಡಾಕ್ಟರ್. ಯದು ರಾಜ್ ಡಿ. ಕೆ, ಮಕ್ಕಳ ಹಿರಿಯ ತಜ್ಞರಾದ ಡಾಕ್ಟರ್ ಪ್ರಶಾಂತ್,ಕಿವಿ ಮೂಗು ಗಂಟಲು ತಜ್ಞರಾದ ಜೈನಾಬು ಸುನು ಆಲಿ,ನೇತ್ರ ತಜ್ಞರಾದ ಡಾಕ್ಟರ್ ಆಶಾ ಜ್ಯೋತಿಯವರು ವಿಕಲ ಚೇತನರ ಪ್ರಮಾಣ ಪತ್ರ ಯು. ಡಿ. ಐಡಿ ಶಿಬಿರ ಪ್ರಮಾಣ ಶಿಬಿರವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪುತ್ತೂರು ಹಾಗೂ ಕಡಬ ತಾಲೂಕಿನ ವಿಕಲ ಚೇತನರ ಇಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಸಹಕಾರ ನೀಡಿದರು.