ಕಣ್ಣೂರು: ಯುವಕನ ಮೇಲೆ ಚೂರಿ ಇರಿತ

0

ಮಂಗಳೂರು: ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ನಡೆದಿರುವ ಬೆನ್ನಿಲ್ಲೇ ಅಡ್ಯಾರ್ ಕಣ್ಣೂರಿನಲ್ಲಿ ಮುಂಜಾನೆ ಯುವಕನೋರ್ವನ ಮೇಲೆ‌ ದುಷ್ಕರ್ಮಿಗಳು ಚೂರಿ ಇರಿತ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಚೂರಿ ಇರಿತಕ್ಕೊಳಗಾದವರನ್ನು ನೌಷಾದ್ ಎಂದು ಗುರುತಿಸಲಾಗಿದ್ದು, ನಗರ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಈ ಘಟನೆ‌ ನಡೆದಿದೆ.

ನೌಶಾದ್ ತೊಕ್ಕೊಟ್ಟು ಸಮೀಪದ ಕಲ್ಲಾಪಿನ ಮಾರ್ಕೆಟ್‌ಗೆ ಹೋಗಲು ಮುಂಜಾನೆ ಅಡ್ಯಾರ್ ಕಣ್ಣೂರು ಹೆದ್ದಾರಿಯಲ್ಲಿ ನಿಂತಿದ್ದ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಆಗಮಿಸಿದ ನಾಲ್ವರು ನೌಷಾದ್‌ ಬೆನ್ನಿಗೆ ಚೂರಿಯಿಂದ ಇರಿದಿದ್ದು,

ಇರಿತವಾದ ತಕ್ಷಣ ತಪ್ಪಿಸಿಕೊಂಡು ನೌಶಾದ್ ಓಡಿ ಪರಾರಿಯಾಗಿದ್ದು, ಬಳಿಕ‌ ಸ್ಥಳೀಯರು ಆತನನ್ನ ನಗರದ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here