ಕೈಕಾರ ಶಾಲಾ ಪ್ರಾರಂಭೋತ್ಸವ

0

ಕೈಕಾರ: ಕೈಕಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಶಿಲ್ಪ ದೀಪ ಪ್ರಜ್ವಲನಗೊಳಿಸಿ ಶುಭ ಹಾರೈಸಿದರು. ನೂತನವಾಗಿ ದಾಖಲಾದ ಧನುಶ್ರೀ(6 ನೇ ತರಗತಿ) ಮೆರವಣಿಗೆ ಉದ್ಘಾಟಿಸಿದಳು. ಸತ್ಯಸಾಯಿ ಸೇವಾ ಬಳಗ ಪುತ್ತೂರು ಇದರ ಸಂಚಾಲಕ ದಯಾನಂದ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶಶಿಕಿರಣ್ ರೈ, ದಯಾನಂದ, ಸಂಜೀತ್ ರೈ ತೊಟ್ಲ ಅನಿಸಿಕೆ ವ್ಯಕ್ತಪಡಿಸಿದರು.

ಸತ್ಯಸಾಯಿ ಶಿಕ್ಷಕ ವಿಭಾಗದ ರೂಪಕಲಾ, ಚಂದ್ರಹಾಸ ರೈ ಪನಡ್ಕ, ಗಣೇಶ್ ರೈ ತೊಟ್ಲ, ಸಂಜೀತ್ ರೈ ತೊಟ್ಲ, ಎಲ್.ಕೆ.ಜಿ ವಿಭಾಗದ ಅಧ್ಯಕ್ಷ ಗೀತಾ ರೈ ಪಿಂಗರ, ಶಾರದಾ ಪ್ರಜ್ವಲ್ ರೈ ತೊಟ್ಲ, ಸರಕಾರಿ ಪ.ಪೂ. ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಜಗನ್ನಾಥ ರೈ, ಬ್ಯಾಂಕ್ ಅಧಿಕಾರಿ ನಾರಾಯಣ ರೈ, ಜಿಲ್ಲಾ ಪುಲಸಾಕೃತ ಶಾಲಾ ಮುಖ್ಯಗುರು ರಾಮಣ್ಣ ರೈ, ಶಿಕ್ಷಕಿ ಶೋಭಾ, ರಾಜೇಶ್ವರಿ ಭಟ್, ಸೂರರಾಜ್, ವೇದಾಕ್ಷಿ, ರಮೇಶ್ ಬಳ್ಳ, ಕಿಶೋರ್ ಮಿನಿಪದವು, ಕುಸುಮಾ, ಮೀನಾಕ್ಷಿ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು 2025-26ನೇ ಸಾಲಿನ ಶಾಲಾ ಚಟುವಟಿಕೆಗಳ ವಿಚಾರಗಳನ್ನು ತಿಳಿಸಿದರು. ಎಲ್ಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಗಿಸಲಾಯಿತು.

LEAVE A REPLY

Please enter your comment!
Please enter your name here