ಬೆಂಗಳೂರು ಬಂಟರ ಸಂಘದಿಂದ ಕಾವು ಹೇಮನಾಥ ಶೆಟ್ಟಿಯವರಿಗೆ ಸನ್ಮಾನ

0

ಪುತ್ತೂರು: ಬೆಂಗಳೂರು ಬಂಟರ ಸಂಘದ ವತಿಯಿಂದ ಹತ್ತನೇ ತರಗತಿಯ ನಂತರದ ಎರಡು ವರ್ಷಗಳ ಪಿಯುಸಿ ವಿದ್ಯಾಭ್ಯಾಸವನ್ನು ಬಂಟ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸುವ ಸಂಕಲ್ಪ ಯೋಜನೆ ಅಡಿಯಲ್ಲಿ 2025-26ನೇ ಸಾಲಿನ ಪುತ್ತೂರು ವಿಭಾಗದಿಂದ 12 ಬಂಟ ವಿದ್ಯಾರ್ಥಿಗಳು ಆಯ್ಕೆಗೊಂಡಿರುತ್ತಾರೆ.

ಪುತ್ತೂರು ವಿಭಾಗದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿದ್ದ 70% ಕ್ಕಿಂತ ಹೆಚ್ಚು ಅಂಕ ಪಡೆದಿರುವ ಬಂಟ ವಿದ್ಯಾರ್ಥಿಗಳಿಗೆ ಉಚಿತ ತರಗತಿ ಉಟೋಪಚಾರ ವಸತಿ ಸಹಿತ ಎಲ್ಲ ವ್ಯವಸ್ಥೆಗಳನ್ನು ಬೆಂಗಳೂರು ಬಂಟರ ಸಂಘ ಉಚಿತವಾಗಿ ಒದಗಿಸುತ್ತಿದೆ, ಈ ವರ್ಷ 135 ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿ ಈ ಬಾರಿ ಒಂದು ದಾಖಲೆಯನ್ನು ಬರೆದಿದೆ. ಇದೇ ಜೂನ್ 2ರಂದು ಬೆಂಗಳೂರಿನ “ಬಂಟ್ಸ್ ಸಂಘ ಆರ್ ಎನ್ ಎಸ್ ಪಿ ಯು ಕಾಲೇಜು” ನಲ್ಲಿ ಈ ಬಗ್ಗೆ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿ ಎ ಅಶೋಕ್ ಶೆಟ್ಟಿ ಯವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಪುತ್ತೂರು ಬಂಟರ ಸಂಘದ ಅಧ್ಯಕ್ಷ, ಬಂಟರ ಯಾನೆ ನಾಡವರ ಮಾತ್ರ ಸಂಘದ ಉಪಾಧ್ಯಕ್ಷ ಕಾವು‌ ಹೇಮನಾಥ ಶೆಟ್ಟಿ ಭಾಗವಹಿಸಿದ್ದರು ಇವರನ್ನು ಬೆಂಗಳೂರು ಬಂಟರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ ಸಹಕಾರವನ್ನು ಒದಗಿಸಿದ ಹಿನ್ನಲೆಯಲ್ಲಿ ಸನ್ಮಾನಿಸಲಾಯಿತು. ಬಂಟರ ಸಂಘದ ಪದಾಧಿಕಾರಿಗಳಾದ ಕಾಂತಿ ಶೆಟ್ಟಿ, ಅನುಸೂಯ ಶೆಟ್ಟಿ, ಜಯಶ್ರೀ ರೈ, ಶೋಭಾ ಎನ್ ಶೇಖ,ರವಿಪ್ರಸಾದ್ ಶೆಟ್ಟಿ ಬನ್ನೂರು,ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ಹಾಗೂ ಬೆಂಗಳೂರು ಬಂಟರ ಸಂಘದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here