ಪುತ್ತೂರು: ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಶ್ರೀ ರಾಮಚಂದ್ರಾಪುರ ಮಠ ಗೋಕರ್ಣ ಮಠ ಇವರಿಂದ ಅನುಗ್ರಹಿಸಲ್ಪಟ್ಟು 36 ಯತಿಗಳ ದಿವ್ಯ ಸಾನಿಧ್ಯ ಹೊಂದಿದ ’ಸ್ವರ್ಣ ಪಾದುಕಾ ಪೂಜೆʼ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ವತಿಯಿಂದ ’ಶ್ರೀಗುರುಪರಂಪರಾ ಭಿಕ್ಷಾ ಸೇವೆ’ ಸಾರ್ವಜನಿಕವಾಗಿ ಸಂಪನ್ನಗೊಳ್ಳಲಿದೆ.
ಆಗಮಿಸಿದ ಪ್ರತಿಯೊಬ್ಬರಿಗೂ ಸ್ವರ್ಣ ಪಾದುಕೆಗಳನ್ನು ಸ್ಪರ್ಶಿಸಿ ನಮಸ್ಕರಿಸುವ ಪುಣ್ಯ ಅವಕಾಶವಿದೆ. ಭಿಕ್ಷಾ ಸೇವೆಯ ನಂತರ ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ಹವ್ಯಕ ವಲಯ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.