ಬಡಗನ್ನೂರುಃ ಕೊಯಿಲ- ಬಡಗನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲ ರಚನೆ ಮಾಡಲಾಯಿತು. ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸಿ, ನಂತರ ಇ ವಿ ಎಮ್ ಆಪ್ ಮೂಲಕ ಮತದಾನ ಮಾಡಿಸಲಾಯಿತು.
ಮುಖ್ಯಮಂತ್ರಿಯಾಗಿ ಸಿ.ಕೆ ಅಹಮದ್ ಸಜದ್ ಆಯ್ಕೆಯಾದರು. ಉಪಮುಖ್ಯಮಂತ್ರಿಯಾಗಿ ಪಿ. ಆರಾಧ್ಯ ಆಯ್ಕೆಯಾದರು.
ಶಿಕ್ಷಣ ಮಂತ್ರಿಯಾಗಿ ಹರ್ಷಿತ್ ಹಾಗೂ ಉಪ ಶಿಕ್ಷಣ ಮಂತ್ರಿಯಾಗಿ ಪಿ.ಆರಾಧ್ಯ.ಆರೋಗ್ಯ ಮಂತ್ರಿಯಾಗಿ ರಕ್ಷಿತ್ ಹಾಗೂ ಉಪ ಆರೋಗ್ಯಮಂತ್ರಿಯಾಗಿ ಧನುಶ್ ರೈ.ಆಹಾರ ಮಂತ್ರಿಯಾಗಿ ಖದೀಜತ್ ಅಝೀಮ. ಉಪ ಆಹಾರಮಂತ್ರಿಯಾಗಿ ತಮನ್. ಟಿ .ಕ್ರೀಡಾ ಮಂತ್ರಿಯಾಗಿ ಉದಿತ್ ಯು ಆರ್. ಉಪ ಕ್ರೀಡಾ ಮಂತ್ರಿಯಾಗಿ ಆಯಿಷತ್ ಸನ್ಹ, ರಕ್ಷಣಾ ಮಂತ್ರಿಯಾಗಿ ತೇಜಸ್ ಮತ್ತು ಉಪ ರಕ್ಷಣಮಂತ್ರಿಯಾಗಿ ದಿವಿತ್ ರೈ, ನೀರಾವರಿ ಮಂತ್ರಿಯಾಗಿ ದಕ್ಷ ಜೆ.ರೈ. ಉಪ ನೀರಾವರಿ ಮಂತ್ರಿ ಆಗಿ ಅಭಿಲಾಶ್, ಓ ಎಸ್. ವಾರ್ತಮಂತ್ರಿಯಾಗಿ ಶಬ್ನ ಫಾತಿಮಾ ಮತ್ತು ಉಪ ವಾರ್ತಾ ಮಂತ್ರಿಯಾಗಿ ಮಹಮ್ಮದ್ ರೈಜ್ ಹಾಗೂ ಖದೀಜತ್ ಅಝೀಮಾ, ಸ್ವಚ್ಛತಾ ಮಂತ್ರಿಯಾಗಿ ಎನ್ ಎ ಮುಹಮ್ಮದ್ ಅನಸ್ ಮತ್ತು ಉಪ ಸ್ವಚ್ಛತಾ ಮಂತ್ರಿಯಾಗಿ ಕೆ ಎಸ್ ಫಾತಿಮಾ ನಾಫಿಯ, ಕಾನೂನು ಮಂತ್ರಿಯಾಗಿ ಪುನೀತ್ ಹಾಗೂ ಉಪ ಕಾನೂನು ಮಂತ್ರಿಯಾಗಿ ಶ್ರಾವಣಿ, ಗ್ರಂಥಾಲಯ ಮಂತ್ರಿಯಾಗಿ ಹರ್ಷಿತ್ ಹಾಗೂ ಉಪಗ್ರಂಥಾಲಯ ಮಂತ್ರಿಯಾಗಿ ಆರಾಧ್ಯ, ತೋಟಗಾರಿಕಾ ಮಂತ್ರಿಯಾಗಿ ಎನ್ ಎ ಮುಹಮ್ಮದ್ ಅನಾಸ್ ಹಾಗೂ ಉಪ ತೋಟಗಾರಿಕಾ ಮಂತ್ರಿಯಾಗಿ ಪವನ್ ಸೃಜನ್ ಆಯ್ಕೆಯಾದರು. ಆಯ್ಕೆಯಾದ ಎಲ್ಲಾ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯೋಪಾಧ್ಯಾಯರಾದ ಪುಷ್ಪಾವತಿ ಎಂ ಬಿ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕ ವೃಂದ ಸಹಕರಿಸಿದರು