ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸಭೆ

0

ಪುತ್ತೂರು: ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯು ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜೂ.12ರಂದು ಪುತ್ತೂರು ಶ್ರೀ ರಾಮಕೃಷ್ಣ ಫ್ರೌಡಶಾಲಾ ಸಭಾಂಗಣದಲ್ಲಿ ಜರಗಿತು. ಸಭೆಯಲ್ಲಿ ತಾಲೂಕು ಬಂಟ ಜನಗಣತಿಯ ಪ್ರಗತಿ ಪರಿಶೀಲನೆ ಮತ್ತು ಗ್ರಾಮ ಸಮಿತಿ ರಚನೆಯ ಬಗ್ಗೆ ಚರ್ಚಿಸಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ (ಜಿಲ್ಲಾ ಹಾಗೂ ತಾಲೂಕು) ಸಾಧಕರನ್ನು ಗೌರವಿಸುವ ಬಗ್ಗೆ, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಸರಕಾರಿ ನಾಮ ನಿರ್ದೇಶನ ಸದಸ್ಯರು, ಲಯನ್ಸ್ ಗವರ್ನರ್ ಹರಿಪ್ರಸಾದ್ ಶೆಟ್ಟಿ ಯವರನ್ನು ಗೌರವಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಲೂಕು ಬಂಟ ಉದ್ಯಮಿಗಳ ಸಮಾಗಮ ನಡೆಸುವ ಬಗ್ಗೆ ಚರ್ಚಿಸಲಾಯಿತು. ಆರ್ಥಿಕವಾಗಿ ತೀರಾ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ 2 ವರುಷದ ದತ್ತು ಸ್ವೀಕಾರದ ಬಗ್ಗೆ, ಹೊಸ ಸದಸ್ಯರ ಸೇರ್ಪಡೆ ಹಾಗೂ ಆರ್ಥಿಕ ಸಹಾಯ ಹಸ್ತದ ಅರ್ಜಿಗಳ ಪರಿಶೀಲನೆ ಹಾಗೂ ಮರೆಯಲಾರದ ಬಂಟರು ಪುಸ್ತಕ ಪ್ರಕಟಣೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ದಯಾನಂದ ರೈ ಮನವಳಿಕೆಗುತ್ತು, ಬೂಡಿಯಾರ್ ರಾಧಾಕೃಷ್ಣ ರೈ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳಾದ ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ಉಪಾಧ್ಯಕ್ಷ ಸುಭಾಸ್ ಕುಮಾರ್ ಶೆಟ್ಟಿ ಆರುವಾರು, ಜೊತೆ ಕಾರ್‍ಯದರ್ಶಿಗಳಾದ ಸ್ವರ್ಣಲತಾ ಜೆ.ರೈ, ಹರಿಣಾಕ್ಷಿ ಜೆ.ಶೆಟ್ಟಿ, ನಿರ್ದೇಶಕರುಗಳಾದ ದಂಬೆಕ್ಕಾನ ಸದಾಶಿವ ರೈ, ಶಶಿಕಿರಣ್ ರೈ ನೂಜಿಬೈಲು, ರವಿಪ್ರಸಾದ್ ಶೆಟ್ಟ ಬನ್ನೂರು, ಇಂದುಶೇಖರ್ ಶೆಟ್ಟಿ, ಸುಧೀರ್ ಶೆಟ್ಟಿ ತೆಂಕಿಲ, ಸದಾಶಿವ ರೈ ಸೂರಂಬೈಲು, ಬಂಟರ ಸಂಘದ ವಿಶೇಷ ಅಹ್ವಾನಿತರಾದ ದಯಾನಂದ ರೈ ಕೊರ್ಮಂಡ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ತಾಲೂಕು ಮಹಿಳಾ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿ ಕುಸುಮ ಪಿ.ಶೆಟ್ಟಿ ಕೆರೆಕೋಡಿ, ನಯನ ವಿ.ರೈ ಕುದ್ಕಾಡಿ, ಸ್ವಸ್ತಿಕಾ ಶೆಟ್ಟಿ ಕುದ್ಕಾಡಿ, ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್‍ಯದರ್ಶಿಗಳಾದ ರಂಜಿನಿ ಶೆಟ್ಟಿ, ಪ್ರಜ್ವಲ್ ರೈ ಸೊರಕೆ ಉಪಸ್ಥಿತರಿದ್ದರು.


ಬಂಟರ ಸಂಘದ ಪ್ರ.ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ವರದಿ ವಾಚಿಸಿದರು. ಕೋಶಾಧಿಕಾರಿ ಸಂತೋಷ ಶೆಟ್ಟಿ ಸಾಜ ವಂದಿಸಿದರು. ಶ್ರೀ ರಾಮಕೃಷ್ಣ ಫ್ರೌಡಶಾಲೆಯ ಗುಣಧರ್ ರೈ ಹಾಗೂ ಬಂಟರ ಭವನದ ಮೇನೇಜರ್ ರವಿಚಂದ್ರ ರೈ ಕುಂಬ್ರ ಸಹಕರಿಸಿದರು.


ಜು.12ರಂದು ಬಂಟರ ಸಂಘದಿಂದ ಸನ್ಮಾನ ಸಂಭ್ರಮ
ತಾಲೂಕು ಬಂಟರ ಸಂಘದಿಂದ ಜು.12ರಂದು ಪುತ್ತೂರು ಬಂಟರ ಭವನದಲ್ಲಿ ಸನ್ಮಾನ ಸಂಭ್ರಮ ಕಾರ್‍ಯಕ್ರಮ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ (ಜಿಲ್ಲಾ ಹಾಗೂ ತಾಲೂಕು) ಸಾಧಕರು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಹಾಗೂ ಸರಕಾರಿ ನಾಮ ನಿರ್ದೇಶನ ಸದಸ್ಯರು, ಲಯನ್ಸ್ ಗವರ್ನರ್ ಹರಿಪ್ರಸಾದ್ ಶೆಟ್ಟಿ ಯವರನ್ನು ಸನ್ಮಾನಿಸುವ ಕಾರ್‍ಯಕ್ರಮ ನಡೆಯಲಿದೆ. ಒಟ್ಟು ನಮ್ಮ ಬಂಟ ಸಮಾಜಕ್ಕೆ ಗೌರವ ತಂದವನರನ್ನು ಸನ್ಮಾನಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು.
ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷರು
ಬಂಟರ ಸಂಘ ಪುತ್ತೂರು

LEAVE A REPLY

Please enter your comment!
Please enter your name here