ಗಯಾಪದ ಕಲಾವಿದೆರ್ ಉಬಾರ್ ತಂಡದ 7ನೇ ವರ್ಷದ ನಾಟಕ`ಓಲು ತತ್ತ್ಂಡ್’ಗೆ ಮುಹೂರ್ತ

0

ಪುತ್ತೂರು: ಗಯಾಪದ ಕಲಾವಿದೆರ್ ಉಬಾರ್ ತಂಡದ 7ನೇ ವರ್ಷದ ಹೊಸ ಕಲಾಕಾಣಿಕೆ `ಓಲು ತತ್ತಂಡ್’ ತುಳು ಹಾಸ್ಯಮಯ ಸಾಮಾಜಿಕ ನಾಟಕದ ಶುಭ ಮುಹೂರ್ತ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜೂ. 14ರಂದು ನಡೆಯಿತು.

ದೇವಸ್ಥಾನದ ಅರ್ಚಕ ಶಂಕರ್ ಭಟ್ ಪೂಜಾ ವಿಧಿವಿಧಾನ ನೆರವೇರಿಸಿ ಶುಭ ಹಾರೈಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿದ್ದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್, ಉದ್ಯಮಿ ಕಿರಣಚಂದ್ರ ಡಿ. ಪುಷ್ಪಗಿರಿ, ಸಚಿನ್ ಬೇಕ್ ಮತ್ತು ಐಸ್‌ನ ಮಾಲಕ ಸಚಿನ್, ಯಕ್ಷಧ್ರವ ಪಟ್ಲ ಫೌಂಡೇಶನ್ ಉಪ್ಪಿಂಗಡಿ ಘಟಕದ ಅಧ್ಯಕ್ಷ ಜಗದೀಶ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಅರ್ತಿಲ ಕೃಷ್ಣರಾವ್ ಮತ್ತು ಶ್ರೀ ಮಹಾಕಾಳಿ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ ಶುಭ ಹಾರೈಸಿದರು.


ನಾಟಕದ ರಚನೆಗಾರ ಮತ್ತು ನಿರ್ದೇಶಕರಾದ ಕಲಾತಪಸ್ವಿ ರವಿಂದ್ರ ಶಾಸ್ತ್ರಿ ಮಣಿಲ, ತಂಡದ ಯಜಮಾನ ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ, ಸಂಗೀತ ನಿರ್ದೇಶಕ ಕಾರ್ತಿಕ್ ಶಾಸ್ತ್ರಿ ಮಣಿಲ, ತಂಡದ ಸಲಹೆಗಾರರಾಗಿರುವ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ, ತಂಡದ ಸಂಚಾಲಕ ಕಿಶೋರ್ ಜೋಗಿ, ನಿರ್ವಾಹಕ ಗುಣಕರ ಅಗ್ನಾಡಿ, ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಯು. ಸತೀಶ್ ಶೆಟ್ಟಿ, ಸುಧಾಕರ ಕೋಟೆ, ಶಶಿಧರ ಶೆಟ್ಟಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಮಾಧವ ಅಮೈ, ಶ್ರೀ ಕ್ಷೇತ್ರದ ಸಿಬ್ಬಂದಿಗಳಾದ ಕೃಷ್ಣಪ್ಪ, ದಿವಾಕರ, ಪದ್ಮನಾಭ ಮತ್ತು ಭವಾನಿ ಶಂಕರ್ ಉಪಸ್ಥಿತರಿದ್ದರು.

7ನೇ ನಾಟಕ
`ಓಲು ತತ್ಂಡ್’ ನಾಟಕ ಉಪ್ಪಿನಂಗಡಿಯ ಗಯಾಪದ ಕಲಾವಿದರು ಅಭಿನಯಿಸುವ ಏಳನೇ ವರ್ಷದ ಏಳನೇ ನಾಟಕವಾಗಿದೆ. ಇದಕ್ಕಿಂತ ಮೊದಲಿನ ಏರ್ ಎಂಚಾಂದ್ ಏರೆಗೊತ್ತು, ಭಾಸ್ಕರೆ ಬಂಗೊಡುಲ್ಲೆ, ಏತ್ ಪಂಡಲಾ ಆತೆ, ನಮ ತೆರಿಯೊನುಗ, ಮುರಳಿ ಪಿರ ಬರೊಲಿ ಮತ್ತು ನಾಗಮಾಣಿಕ್ಯ ನಾಟಕ ಕಲಾ ರಸಿಕರ ಗಮನ ಸೆಳೆದಿತ್ತು.

ಕಲಾವಿದರಾದ ರವಿಶಂಕರ ಶಾಸ್ತ್ರೀ ಮಣಿಲ, ಬಿ.ರಂಗಯ್ಯ ಬಲ್ಲಾಳ, ದಿವಾಕರ ಸೂರ್ಯ, ಸತೀಶ್‌ ಶೆಟ್ಟಿ ಹೆನ್ನಳ, ಚೇತನ್‌ ಪಡೀಲ್‌, ಎ ಎನ್‌ ಕೊಳಂಬೆ, ಸಂದ್ಯಾಶ್ರೀ ಪೆರಿಯಡ್ಕ, ಸುನಿಲ್‌ ಪೆರ್ನೆ, ಉದಯ್‌ ಪುತ್ತೂರು, ರಾಜ ಶೇಖರ್‌ ಶಾಂತಿನಗರ, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಅನುಷಾ ಜೋಗಿ, ಭರತ್‌ ಶಾಂತಿನಗರ, ಅನೀಶ್‌ ಉಬಾರ್‌, ಮನ್ವಿತ್‌ ಬೆಳ್ಳಿಪ್ಪಾಡಿ, ಹೃತಿಕಾ, ಪ್ರಣಿತಾ, ವಿಲಾಸಿನಿ, ಲತಿನ್‌ ,ಕಿಶೋರ್‌ ಜೋಗಿ, ರಾಜೇಶ್‌ ಇದರಲ್ಲಿ ಅಭಿನಯಿಸಲಿದ್ದಾರೆ.

ತಾಂತ್ರಿಕ ವರ್ಗ: ಸಂಗೀತ ನಿರ್ದೇಶಕ ಕಾರ್ತಿಕ್‌ ಶಾಸ್ತ್ರಿ, ವರ್ಣಾಲಂಕಾರ: ಪ್ರದೀಪ್‌ ಕಾವು, ಲೈಟ್ಸ್‌: ಕೃಷ್ಣ ಮುಂಡ್ಯ, ಸೌಂಡ್ಸ್‌: ಸಿದ್ದು, ರಂಗಾಲಂಕಾರ: ವಿಜಯ್‌ ಶಾಂತಿನಗರ, ರಾಜೇಶ್‌ ಶಾಂತಿನಗರ, ಭರತ್‌ ಶಾಂತಿನಗರ, ಹರೀಶ್‌ ಪುಣಚ, ರಾಜೇಶ್‌ ಪುಣಚ, ಸಹಾಯಕರು: ಹರೀಶ್‌ ಭಟ್ ಪುಣಚ, ಸಾರಥಿ: ಮೋನಪ್ಪ, ಮಿಥುನ್‌ ರಾಜ್‌ ವಿದ್ಯಾಪುರ ಸಹಕರಿಸಲಿದ್ದಾರೆ.

LEAVE A REPLY

Please enter your comment!
Please enter your name here