ವಿಟ್ಲ: ಕುಲಾಲ ಸಂಘ ವಿಟ್ಲ ಇದರ ರಜತ ಮಹೋತ್ಸವದಂದು ಸಾಂಕೇತಿಕ ಬಿಡುಗಡೆಗೊಂಡ ಬೆಳ್ಳಿ ಕುಂಭ ಸ್ಮರಣ ಸಂಚಿಕೆಯನ್ನು ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿರವರು ಶ್ರೀಧಾಮದಲ್ಲಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಕುಲಾಲ ಸಂಘದ ಸ್ಥಾಪಕಧ್ಯಕ್ಷರಾದ ರಮಾನಾಥ ವಿಟ್ಲ, ಅಧ್ಯಕ್ಷ ಬಾಬು.ಕೆ, ಕೋಶಾಧಿಕಾರಿ ಅಚ್ಚುತ ಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ ವಿಟ್ಲ, ಜತೆ ಕಾರ್ಯದರ್ಶಿ ಅರುಣಾಕರ ಪೆರ್ವಾಜೆ, ಉಪಾಧ್ಯಕ್ಷರು, ಸ್ಮರಣ ಸಂಚಿಕೆ ಸಂಪಾದಕರಾದ ರಾಧಾಕೃಷ್ಣ ಎರುಂಬು ಉಪಸ್ಥಿತರಿದ್ದರು.