ಪುತ್ತೂರು: ಪುತ್ತೂರು ಸಂಜಯನಗರ ಸರಕಾರಿ ಶಾಲಾ ಮಕ್ಕಳಿಗೆ ಇರ್ದೆ ಸರಕಾರಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವಾಣಿ ದೇವರಾಜ್ ಅವರು ಬರೆಯುವ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಬಳಿಕ ಮಾತನಾಡಿದ ಅವರು ನಮ್ಮ ದುಡಿತದ ಭಾಗವನ್ನು ಸ್ವಲ್ಪವಾದರೂ ಇತರಿಗೆ ಹಂಚಿದಾಗ ಸಿಗುವ ಖುಷಿ ಬಹುದೊಡ್ಡದು.ವಿದ್ಯಾಭ್ಯಾಸ ಇಂದು ಮನುಷ್ಯನ ಮೂಲಭೂತ ಸಂಗತಿಯಾಗಿದೆ. ಎಲ್ಲರಿಗೂ ಪ್ರಗತಿ ಹೊಂದುವ ಅತಿ ಮುಖ್ಯ ಸಾಧನವೆಂದರೆ ಅದು ವಿದ್ಯೆ ಮಾತ್ರ. ವಿದ್ಯಾ ಕ್ಷೇತ್ರದಲ್ಲಿ ನಾವೆಲ್ಲರೂ ಒಬ್ಬರಿಗೊಬ್ಬರು ಸಹಕರಿಸಿ ಬದುಕಬೇಕು ಎಂದರು.
ಶಾಲಾ ಮುಖ್ಯ ಗುರುಗಳಾದ ರಮೇಶ್ ಉಳಯ ಮಾತನಾಡಿ, ದಾನಗಳಲ್ಲಿ ಅತ್ಯಂತ ದೊಡ್ಡ ದಾನ ವಿದ್ಯಾ ದಾನ. ವಿದ್ಯೆಗೆ ಸಹಕರಿಸುವವರೆಲ್ಲರೂ ಉನ್ನತ ವ್ಯಕ್ತಿಗಳಾಗುತ್ತಾರೆ ಎಂದು ಹೇಳಿದರು. ಮಕ್ಕಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸುವ ಮೂಲಕ ವಾಣಿ ದೇವರಾಜ್ ಅವರು ಶಿಕ್ಷಕ ವೃಂದಕ್ಕೆ ಮಾದರಿಯಾಗಿದ್ದಾರೆ ಎಂದರು.

ಶಾಲಾ ಹಿರಿಯ ಶಿಕ್ಷಕಿ ಸೀತಾಶ್ರೀ ಕಾರ್ಯಕ್ರಮ ಸಂಯೋಜಿಸಿದರು. ಅತಿಥಿ ಶಿಕ್ಷಕಿ ಸೌಮ್ಯ ಸಹಕರಿಸಿದರು.