ಪುತ್ತೂರು: ಧನ್ವಂತರಿ ಕ್ಲಿನಿಕಲ್ ಲ್ಯಾಬರೋರೇಟರಿಯ ನೆಹರುನಗರ ಕೃಷ್ಣಕಮಲ ಸಂಕೀರ್ಣದಲ್ಲಿರುವ ಶಾಖೆಯಲ್ಲಿ ಜೂ.20 ರಿಂದ 22ರ ತನಕ ಉಚಿತ ಥೈರಾಡ್, ಮಧುಮೇಹ, ರಕ್ತದೊತ್ತಡ ತಪಾಸಣಾ ಶಿಬಿರ ನಡೆಯಲಿದೆ.
ಮೂರು ದಿನಗಳು ನಡೆಯುವ ಈ ಶಿಬಿರದಲ್ಲಿ ಎಲ್ಲಾ ರಕ್ತಪರೀಕ್ಷಾ ಪ್ಯಾಕೇಜ್ಗಳ ಮೇಲೆ ಶೇ.10 ರಿಂದ 20ರ ತನಕ ವಿಶೇಷ ರಿಯಾಯಿತಿಯೂ ಇದೆ. ಸಂಪೂರ್ಣ ಸ್ವಯಂಚಾಲಿತ ತಂತ್ರಜ್ಞಾನದ ಉಪಕರಣಗಳಿಂದ ಉತ್ತಮ ಫಲಿತಾಂಶ ನೀಡುವ ಲ್ಯಾಬ್ನ ಪ್ರಯೋಜವನ್ನು ಸಾರ್ವಜನಿಕರು ಪಡೆಯಬೇಕೆಂದು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ಪ್ರಕಾಶ್ ಕಜೆ ಅವರು ತಿಳಿಸಿದ್ದಾರೆ.