ಹಿರೇಬಂಡಾಡಿ: ಕೆಮ್ಮಾರ ಮುದಲೆಗುಂಡಿ ಗಣೇಶ ಕಟ್ಟೆಪೂಜಾ ಸಮಿತಿಯ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ನಿಧನರಾದ ಸದಾನಂದ ಶೆಟ್ಟಿ ಕೆಮ್ಮಾರಗುತ್ತುರವರಿಗೆ ಗಣೇಶ ಕಟ್ಟೆಪೂಜಾ ಸಮಿತಿ ವತಿಯಿಂದ ಶ್ರದ್ದಾಂಜಲಿ ಕಾರ್ಯಕ್ರಮ ಕೆಮ್ಮಾರ ಮುದಲೆಗುಂಡಿಯಲ್ಲಿರುವ ಸಮಿತಿಯ ಕಾರ್ಯಾಲಯದಲ್ಲಿ ಜೂ.18ರಂದು ಸಂಜೆ ನಡೆಯಿತು.
ಸಮಿತಿಯ ನಿಕಟಪೂರ್ವ ಅಧ್ಯಕ್ಷ ಮೋಹನ್ದಾಸ್ ಶೆಟ್ಟಿ ಬಡಿಲ, ಯಶವಂತ ಗುಂಡ್ಯ, ಅಶೋಕ್ ಕೊಯಿಲ, ಶಾಂತರಾಮ ಓಡ್ಲ, ವಿಶ್ವನಾಥ ಶೆಟ್ಟಿ ನೆಕ್ಕರಾಜೆ ಅವರು ದಿವಂಗತ ಸದಾನಂದ ಶೆಟ್ಟಿಯವರ ಗುಣಗಾನ ಮಾಡಿ ನುಡಿ ನಮನ ಸಲ್ಲಿಸಿದರು. 1 ನಿಮಿಷ ಮೌನ ಪ್ರಾರ್ಥನೆ ಹಾಗೂ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಿರಶಾಂತಿ ಕೋರಲಾಯಿತು. ಪೂಜಾ ಸಮಿತಿಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
