ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಘದ ರಚನೆ

0

ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಜೂನ್ 18 ರಂದು ವಿದ್ಯಾರ್ಥಿ ನಾಯಕ, ನಾಯಕಿ ಹಾಗೂ ಶಾಲಾ ಮಂತ್ರಿಮಂಡಲವನ್ನು ವ್ಯವಸ್ಥಿತ ಚುನಾವಣಾ ಪ್ರಕ್ರಿಯೆಯ ಮೂಲಕ ರಚಿಸಲಾಯಿತು.

ಶಾಲಾ ನಾಯಕನಾಗಿ ಹತ್ತನೇ ತರಗತಿಯ ನಿಹಾಲ್ ಸಿ ರೈ, ನಾಯಕಿಯಾಗಿ ಹತ್ತನೇ ತರಗತಿಯ ಆಪ್ತ ಚಂದ್ರಮತಿ ಮುಳಿಯ, ವಿರೋಧ ಪಕ್ಷದ ನಾಯಕನಾಗಿ ಶ್ರುತಾಸ್ .ವಿ. ರವರು ಆಯ್ಕೆಯಾಗಿರುತ್ತಾರೆ.


ಸಾಂಸ್ಕೃತಿಕ ಮಂತ್ರಿಯಾಗಿ ಗಗನ್ ಎನ್ ವಿ, ಶಿಕ್ಷಣ ಮಂತ್ರಿಯಾಗಿ ಧನ್ಯಶ್ರೀ ಎಚ್ ಪಿ, ಆಹಾರ ಮಂತ್ರಿಯಾಗಿ ಕವಿನ್ ಕೆ ಆರ್, ಆರೋಗ್ಯ ಮಂತ್ರಿಯಾಗಿ ಕೃತಿ ರೈ, ಕ್ರೀಡಾಮಂತ್ರಿಯಾಗಿ ಸಿಯಾ ಭವಿನ್ ಸಾವ್ ಜನಿ , ಸ್ವಚ್ಛತಾ ಮಂತ್ರಿಯಾಗಿ ಭಾರವಿ ಕೆ ಭಟ್, ಹಾಗೂ ಶಿಸ್ತಿನ ಮಂತ್ರಿಯಾಗಿ ಆಯುಷ್ ಪಿ. ಶೆಟ್ಟಿ ಆಯ್ಕೆಯಾಗಿರುತ್ತಾರೆ.

ಶಾಲಾ ಪ್ರಾಂಶುಪಾಲರು ಮತ್ತು ಶೈಕ್ಷಣಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ, ಶಿಕ್ಷಕ ಹಾಗೂ ಶಿಕ್ಷಕರ ತಂಡ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here