‘ಹರಿ ದ್ವರ್ಣ’ ಇದು ಮನುಕುಲ ಹಾಗೂ ಭೂಗರ್ಭದ ನಡುವಿನ ಮಹಾಯುದ್ಧ. ನಾವು ಪ್ರಕೃತಿಯನ್ನು ಎಷ್ಟು ಪ್ರೀತಿಯಿಂದ ಹಾರೈಕೆ ಮಾಡುತ್ತೇವೆಯೋ ಅದು ಕೂಡ ನಮ್ಮನ್ನು ಅದೇ ರೀತಿ ಪೋಷಿಸಿ ಸಲಹುತ್ತದೆಂದರೆ ತಪ್ಪಾಗಲಾರದು.
ಕಸ್ವಿ ಹಸಿರು ದಿಬ್ಬಣ ಸಂಸ್ಥೆಯ ನಿರ್ಮಾಣದಲ್ಲಿ ಹಾಗೂ ಡ್ರೀಮ್ ಪಿಕ್ಚರ್ಸ್ ಪ್ರಸ್ತುತ ಪಡಿಸುತ್ತಿರುವ ಕನ್ನಡ ಕಿರುಚಿತ್ರ ಹರಿ ದ್ವರ್ಣ ಇದರ ಪ್ರೀಮಿಯರ್ ಶೋ ಜೂ.22 ರಂದು ಜಿ ಎಲ್ ವನ್ ಮಾಲ್ ನಲ್ಲಿರುವ ಭಾರತ ಟಾಕೀಸ್ ನಲ್ಲಿ ಪ್ರದರ್ಶನಗೊಳ್ಳಲಿದೆ.
ಹರಿದ್ವರ್ಣ ಕಿರುಚಿತ್ರದಲ್ಲಿ ಸುರೇಶ್ ಗೌಡ ಛಾಯಾಗ್ರಹಣ, ಸಹ ನಿರ್ದೇಶನ ಹಾಗೂ ಸಮಗ್ರ ನಿರ್ವಹಣೆ ಅಚಲ್ ವಿಟ್ಲ ಮಾಡಿರುತ್ತಾರೆ. ಬಾತು ಕುಲಾಲ್ ಇವರ ಸಂಕಲನ ಹಾಗೂ ಪೋಸ್ಟರ್ ಡಿಸೈನ್ ಚೇತನ್ ಆಚಾರ್ ಮಾಡಿರುತ್ತಾರೆ. ಮಾಸ್ಟರ್ ಸೃಜನ್, ಮಾಸ್ಟರ್ ಪ್ರಜ್ವಲ್, ರಾಜೇಶ್ ನರಿಕೊಂಬು, ಮನೋಜ್ ಸೊರಕೆ ಹಾಗೂ ಮನ್ವಿತ ಉಪ್ಪಿನಂಗಡಿ ನಟಿಸಿದ್ದಾರೆ.
ಶ್ರದ್ಧಾ ಕೇಶವ ರಾಮಕುಂಜ ನಿರ್ಮಾಪಕರಾಗಿ, ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಚೇತನ್ ಕೆ. ವಿಟ್ಲ (ಚೇ.ಕೆ.ವಿ) ಬರೆದಿದ್ದು, ಹಲವು ಕಲಾವಿದರ ಕೈಚಳಕದಿ ಈ ಚಿತ್ರ ಮೂಡಿ ಬಂದಿದೆ.