ನಾಯಕ: ಕಾರ್ತಿಕ್ ಎನ್, ಉಪನಾಯಕ: ಹಾರ್ದಿಕ್ ಡಿ
ಪುತ್ತೂರು: ಬೊಳಿಕ್ಕಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲವನ್ನು ಇತ್ತೀಚಿಗೆ ಚುನಾವಣೆಯ ಮೂಲಕ ರಚನೆ ಮಾಡಲಾಯಿತು. ಶಾಲಾ ನಾಯಕರಾಗಿ 7 ನೇ ತರಗತಿಯ ಕಾರ್ತಿಕ್ ಎನ್, ಉಪನಾಯಕರಾಗಿ 7 ನೇ ತರಗತಿಯ ಹಾರ್ದಿಕ್ ಡಿ.ರವರು ಆಯ್ಕೆಯಾದರು. ಇತರ ಮಂತ್ರಿಗಳಾಗಿ ಆರೋಗ್ಯ ಮಂತ್ರಿಯಾಗಿ ಜನ್ಯತಾ ಪಿ(7ನೇ), ಉಪ ಆರೋಗ್ಯ ಮಂತ್ರಿಯಾಗಿ ಫಾತಿಮತ್ ಮುಹ್ಶಿನ(5ನೇ), ಶಿಕ್ಷಣ ಮಂತ್ರಿಯಾಗಿ ಶ್ರಾವಣ್ ಪಿ.ಎಸ್(6ನೇ), ಉಪ ಶಿಕ್ಷಣ ಮಂತ್ರಿಯಾಗಿ ತ್ರಿಶಾಂತ್ (6ನೇ), ಕ್ರೀಡಾ ಮಂತ್ರಿಯಾಗಿ ತೇಜಸ್ ಕೆ, ಉಪ ಕ್ರೀಡಾಮಂತ್ರಿಯಾಗಿ ಅಂಕಿತ್, ಸಾಂಸ್ಕೃತಿಕ ಮಂತ್ರಿಯಾಗಿ ಶಮಾ ಎನ್.ಜಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ನಿಧಿಶ್ರೀ ಎಸ್.ಕೆ, ನೀರಾವರಿ ಮಂತ್ರಿಯಾಗಿ ಕೌಶಲ್ ಬಿ.ಕೆ, ಉಪ ನೀರಾವರಿ ಮಂತ್ರಿಯಾಗಿ ಸಜಿತ್ ಜೆ, ಸ್ವಚ್ಛತಾ ಮಂತ್ರಿಯಾಗಿ ಪ್ರಾರ್ಥನಾ ಪಿ, ಉಪ ಸ್ವಚ್ಛತಾ ಮಂತ್ರಿಯಾಗಿ ಫಾತಿಮಾ ಅಫ್ನಾ, ಗೃಹಮಂತ್ರಿಯಾಗಿ ಯಜ್ಞೇಶ್ ಪಿ, ಉಪ ಗೃಹಮಂತ್ರಿಯಾಗಿ ಗವಿತ್ ಎನ್, ಆಹಾರ ಮಂತ್ರಿಯಾಗಿ ಆರ್.ಲಿಯ, ಉಪ ಆಹಾರ ಮಂತ್ರಿಯಾಗಿ ವಂಶಿ ಬಿ, ಸಭಾಪತಿಯಾಗಿ ಫಾತಿಮತ್ ಶಾಇಫ ಕೆರವರುಗಳು ಆಯ್ಕೆಯಾದರು. ಶಾಲಾ ಮುಖ್ಯಗುರು ಸೋಮಾವತಿ ಎ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.