ಪುಣ್ಚಪ್ಪಾಡಿ ಶಾಲಾ ಸಂಸತ್: ಇವಿಎಂ ಬಳಸಿ ಚುನಾವಣೆ – ಮುಖ್ಯಮಂತ್ರಿ ತನ್ವಿತ್ ಪಿ ಎಸ್, ಉಪಮುಖ್ಯ ಮಂತ್ರಿ ಯಕ್ಷಿತ್

0

ಸವಣೂರು: ಪುಣ್ಚಪ್ಪಾಡಿ ಶಾಲೆಯಲ್ಲಿ ಶಾಲಾ ಸರಕಾರ ರಚನೆಯ ಸಂಭ್ರಮ. ಪ್ರಜಾಪ್ರಭುತ್ವ ಮಾದರಿಯ ಚುನಾವಣಾ ಘೋಷಣೆ ನಡೆದ ಬಳಿಕ ಅಭ್ಯರ್ಥಿಗಳು  ಚುನಾವಣಾ ಕಣದಲ್ಲಿಯಲು ಸಿದ್ಧರಾದರು. ತಮ್ಮ ಬೆಂಬಲಿಗರೊಂದಿಗೆ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ  ನಡೆಯಿತು. ನಂತರ ಅಭ್ಯರ್ಥಿಗಳಿಗೆ ಗುರುತಿನ ಚಿಹ್ನೆಗಳನ್ನು ಹಂಚಿ ವಿವಿಧ ಪ್ರಣಾಳಿಕೆಗಳೊಂದಿಗೆ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆಯಿತು.

ವಿದ್ಯಾರ್ಥಿಗಳೆಲ್ಲರೂ ಶಾಲಾ ಐಡಿ ಕಾರ್ಡ್ ನ್ನು ಗುರುತಿನ ಚೀಟಿಯಾಗಿ ಬಳಸಿ ತಮ್ಮ ಮತ ಚಲಾಯಿಸಿದರು. ಶೇಕಡಾ 99 ಮತದಾನ ನಡೆಯಿತು. ಮತದಾನದ ದಿನ ವಿಶೇಷವಾಗಿ ಮೊಬೈಲ್  ಇ. ವಿ ಯಂ. ಆಪ್ ಮೂಲಕ ಮತದಾನ ನಡೆದು ಫಲಿತಾಂಶ ಘೋಷಣೆ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು.

ಶಾಲಾ ಮುಖ್ಯಮಂತ್ರಿಯಾಗಿ ತನ್ವಿತ್ ಪಿ ಎಸ್ 7 ನೇ ತರಗತಿ ಮತ್ತು  ಉಪ ನಾಯಕನಾಗಿ ಯಕ್ಷಿತ್ 6ನೇ ತರಗತಿ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ಕೃತಿ, ಉಪ ಶಿಕ್ಷಣ ಮಂತ್ರಿಯಾಗಿ ಶ್ರೀಯಾ, ಆರೋಗ್ಯಮಂತ್ರಿಯಾಗಿ ಸನ್ನಿಧಿ ಎನ್, ಉಪ ಆರೋಗ್ಯಮಂತ್ರಿಯಾಗಿ ಜನ್ವಿತ್, ಆಹಾರ ಮಂತ್ರಿಯಾಗಿ ಷಣ್ಮುಖ, ಉಪ ಆಹಾರ ಮಂತ್ರಿಯಾಗಿ ಚೈತನ್ಯ, ಕ್ರೀಡಾ ಮಂತ್ರಿಯಾಗಿ ಪ್ರವೀಣ,  ಉಪ ಕ್ರೀಡಾ ಮಂತ್ರಿಯಾಗಿ ,ಸಮೃದ್, ರಕ್ಷಣಾ ಮಂತ್ರಿಯಾಗಿ ತೃಪ್ತಿ, ಉಪ ರಕ್ಷಣಾ ಮಂತ್ರಿಯಾಗಿ ಆಕಾಶ್, ನೀರಾವರಿ ಮಂತ್ರಿಯಾಗಿ ಪ್ರೀತೇಶ್, ಕಾನೂನು ಹಾಗೂ ಗ್ರಂಥಾಲಯ ಮಂತ್ರಿಯಾಗಿ ಸನ್ನಿಧಿ ಡಿ ರೈ, ತೋಟಗಾರಿಕಾ ಮಂತ್ರಿಯಾಗಿ ಪ್ರಶಾಂತಿ ,ಉಪ ತೋಟಗಾರಿಕಾ ಮಂತ್ರಿ ತೃಪ್ತಿ , ಸಾಂಸ್ಕೃತಿಕ ಮಂತ್ರಿಯಾಗಿ ಯಶ್ವಿ ಆಯ್ಕೆಯಾದರು. ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು ಪ್ರಮಾಣ ವಚನ ಬೋಧಿಸಿದರು. 

ಪದವೀಧರ ಶಿಕ್ಷಕಿ ಶೋಭಾ, ಅತಿಥಿ ಶಿಕ್ಷಕರಾದ ಭಾಗೀರಥಿ , ಲೀಲಾವತಿ, ಭವಾನಿ ಚುನಾವಣಾ ಅಧಿಕಾರಿಗಳಾಗಿ ಸಹಕರಿಸಿದರು.

LEAVE A REPLY

Please enter your comment!
Please enter your name here