ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ದಶಮಾನೋತ್ಸವ ಸಂಭ್ರಮ

0

ಶಾಖಾ ಕಚೇರಿಯಲ್ಲಿ ಗಣಪತಿ ಹವನ ಮತ್ತು ಲಕ್ಸ್ಮಿ ಪೂಜೆ,ಸಭಾ ಕಾರ್ಯಕ್ರಮ,ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ
ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರದಿಂದ ಬಹುದೊಡ್ಡ ಕೊಡುಗೆ ಸಂಜೀವ ಮಠಂದೂರು
ದಾಖಲೆಯ ವ್ಯವಹಾರ, ಗುರಿ ಮುಟ್ಟಿದ ಸಾಧನೆ- ಚಿದಾನಂದ ಬೈಲಾಡಿ
ವ್ಯವಹಾರ ಕ್ಷೇತ್ರದಲ್ಲಿ ಛಲ, ಹಠವಿದ್ದರೆ ಯಾವುದೇ ಸಾಧನೆಯನ್ನು ಸಾಧಿಸಬಹುದು- ಮೋಹನ್ ಗೌಡ ಇಡ್ಯಾಡ್ಕ
ನಗುಮೊಗದ ಸೇವೆ, ಗೌರವ, ವ್ಯವಹಾರ ಧರ್ಮವೇ ಸಂಸ್ಥೆಯ ಯಶಸ್ವಿಗೆ ಕಾರಣ- ಸುಭಾಷ್ ರೈ ಕಡಮಜಲು
ಒಂದು ಜಾತಿಗೆ ಸೀಮಿತವಾಗದೆ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ -ಪಿ ಕೆ ಮಹಮದ್
ಗ್ರಾಹಕರ ಸೇವೆಯಿಂದ ಜನಸ್ನೇಹಿಗಿರುವ ಕುಂಬ್ರ ಶಾಖೆ ಶತಮಾನೋತ್ಸವ ಪೂರೈಸಲಿ-ಕೃಷ್ಣ ಕುಮಾರ್ ಉಪಾಧ್ಯಾಯ
ಕುಂಬ್ರ ಶಾಖೆಯು ಇನ್ನಷ್ಟು ಅಭಿವೃದ್ಧಿ ಹೊಂದಲಿ- ಎ ಕೆ ಜಯರಾಮ ರೈ
ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಸಹಕಾರಿ ಸಂಘ- ತ್ರಿವೇಣಿ ಪಳ್ಳತ್ತಾರು
ಜಾತಿ ಸಂಘಗಳು ಸಂಘಟನೆಗೆ, ಸೌಹಾರ್ದತೆಗೆ ಹೊರತು ಸಂಘರ್ಷಕಲ್ಲ -ರವಿ ಮುಂಗ್ಲಿಮನೆ
ಗ್ರಾಹಕರ ಸಹಕಾರ, ಸಲಹಾಸಮಿತಿಯ ನಿಸ್ವಾರ್ಥ ಸೇವೆ, ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ಶಾಖೆ ಅತ್ಯುತ್ತಮ ಸಾಧನೆಯಲ್ಲಿದೆ- ಲೋಕೇಶ್ ಚಾಕೋಟೆ
ಗ್ರಾಹಕರ ಸಹಕಾರದಿಂದ ಯಶಸ್ವಿ 11ನೇ ವರ್ಷಕ್ಕೆ ಪಾದಾರ್ಪಣೆ -ಶಿವರಾಮ ಗೌಡ ಇದ್ಯಾಪೆ

ಕುಂಬ್ರ:ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಾಯೋಜಿತ,ಪುತ್ತೂರು ಎಪಿಯಂಸಿ ರಸ್ತೆಯಲ್ಲಿನ ಮಣಾಯಿ ಆರ್ಚ್ ಕಟ್ಟಡದಲ್ಲಿ ಪ್ರಧಾನ ಕಚೇರಿ ಹೊಂದಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಕುಂಬ್ರ ಶಾಖೆಯು ಯಶಸ್ವಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದಶಮಾನೋತ್ಸವ ಸಂಭ್ರಮವು ಕಿರಣ್ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಂಬ್ರ ಶಾಖ ಕಚೇರಿಯಲ್ಲಿ ಜೂನ್ 21 ಬೆಳಿಗ್ಗೆ 7.00 ಗಂಟೆಗೆ ಪುರೋಹಿತ ಕೃಷ್ಣ ಕುಮಾರ್ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಗಣಪತಿ ಹವನ ಲಕ್ಸ್ಮ್ನಿ ಪೂಜೆ ಮತ್ತು ಬೆಳಿಗ್ಗೆ 9.30ಕ್ಕೆ ಸಭಾ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಕೆ ಸನ್ಮಾನ,ನಡೆಯಿತು.


ದಾಖಲೆಯ ವ್ಯವಹಾರ, ಗುರಿ ಮುಟ್ಟಿದ ಸಾಧನೆ -ಚಿದಾನಂದ ಬೈಲಾಡಿ
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಮಾತನಾಡಿ ಒಕ್ಕಲಿಗ ಗೌಡ ಸೇವಾ ಸಂಘದ ಅಂದಿನ ಅಧ್ಯಕ್ಷರಾಗಿದ್ದ ಮೋಹನ ಗೌಡ ಇಡ್ಯಡ್ಕ ಅವರ ನೇತೃತ್ವದಲ್ಲಿ 20 ಮಂದಿ ಸಮಾನ ಮನಸ್ಕರ ತಂಡ ರಚಿಸಿ ಸಂಘ ಸ್ಥಾಪನೆ ಪ್ರಕ್ರಿಯೆ ಆರಂಭಗೊಂಡು,ಇದರ ಫಲವಾಗಿ ಸೆ. 2. 2002 ರಲ್ಲಿ ಪುತ್ತೂರಿನಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉದ್ಘಾಟನೆಗೊಂಡಿತು.ಜಗನ್ನಾಥ ಬೊಮ್ಮೆಟ್ಟಿ ಅವರ ಸ್ಥಾಪಕಾಧ್ಯಕ್ಷರಾಗಿ ನೇತೃತ್ವ ವಹಿಸಿಕೊಂಡಿದ್ದರು.ಆ ನಂತರ 2009ರಲ್ಲಿ ಕಡಬ ಶಾಖೆ,2011ರಲ್ಲಿ ಉಪ್ಪಿನಂಗಡಿ, 2014 ರಲ್ಲಿ ನೆಲ್ಯಾಡಿ,2015 ರಲ್ಲಿ ಕುಂಬ್ರ, 2020 ರಲ್ಲಿ ಅಲಂಕಾರು,2021 ರಲ್ಲಿ ಪುತ್ತೂರು,2022ರಲ್ಲಿ ಕಾಣಿಯೂರು,2023ರಲ್ಲಿ ಬೆಳ್ಳಾರೆಯಲ್ಲಿ ಶಾಖೆ,2024 ರಲ್ಲಿ ವಿಟ್ಲ ಶಾಖೆ ಆರಂಭಿಸಲಾಗಿದ್ದು, 2020 ರಿಂದ 2025 ವರ್ಷಕ್ಕೆ 5 ಶಾಖೆ ಆರಂಭಗೊಂಡಿರುವುದು ಸಂಘದ ಅಭಿವೃದ್ಧಿಯ ಸಂಕೇತವಾಗಿದೆ ಎಂದರು. ಸಂಘವು 2024 -2025 ನೇ ಸಾಲಿನಲ್ಲಿ ಸಂಘದ 10 ಶಾಖೆ ಗಳಲ್ಲೂ ದಾಖಲೆಯ ಮಟ್ಟದ ವ್ಯವಹಾರ ನಡೆದಿದ್ದು, ಸಂಘದಲ್ಲಿ ಒಟ್ಟು 744 ಕೋಟಿ ರೂ ಮಿಕ್ಕಿ ವ್ಯವಹಾರ ನಡೆದಿದ್ದು 99.18% ಶೇ.ಸಾಲ ವಸೂಲಾತಿಯಾಗಿದೆ.ಕುಂಬ್ರ ಶಾಖೆಯು ಕೂಡ ರೂ 65 ಕೋಟಿ ಮಿಕ್ಕಿ ವ್ಯವಹಾರ ಮಾಡಿದ್ದು,ಶೇ 99.03 ವಸೂಲಾತಿಯಾಗಿದೆ. ಕುಂಬ್ರ ಶಾಖೆಯು ಕೂಡ ಸಲಹಾ ಸಮಿತಿ ಹಾಗು ಸಿಬ್ಬಂದಿ ವರ್ಗ ಮತ್ತು ಗ್ರಾಹಕರ ಸಹಕಾರದಿಂದ ಅತ್ಯುತ್ತಮ ವ್ಯವಹಾರ ನಡೆಸಿ ಉನ್ನತ ಮಟ್ಟದ ಸಾಧನೆ ಮಾಡಿದೆ ಎಂದರು.


ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರದಿಂದ ಬಹುದೊಡ್ಡ ಕೊಡುಗೆ ಸಂಜೀವ ಮಠoದೂರು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ನಿಕಟಪೂರ್ವ ಶಾಸಕರಾದ ಸಂಜೀವ ಮಠ೦ದೂರು ಮಾತನಾಡಿ ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಆರ್ಥಿಕತೆ ಪ್ರಗತಿಗೆ ಸಹಕಾರಿ ಕ್ಷೇತ್ರ ದೊಡ್ಡ ಕೊಡುಗೆಯನ್ನು ನೀಡಿದೆ.ರೈತಾಪಿ ವರ್ಗಕ್ಕೆ ಆರ್ಥಿಕ ಸಹಕಾರಕ್ಕಾಗಿ ಆರಂಭಗೊಂಡ ಸಹಕಾರಿ ಸಂಘಗಳು ದೊಡ್ದ ಪ್ರಸ್ತುತ ಮಟ್ಟದಲ್ಲಿ ಬೆಳೆದು ನಿಂತಿದೆ,ಗ್ರಾಹಕ ಬಂಧುಗಳಿಗೆ ಉತ್ತಮ ಸೇವೆ ನೀಡುತ್ತಾ ಹತ್ತು ವರ್ಷಗಳನ್ನು ಪೂರೈಸಿದ ಕುಂಬ್ರ ಶಾಖೆಯು ಶತಮಾನೋತ್ಸವ ಆಚರಿಸವುದರ ಜೊತೆಗೆ ಸ್ವಂತ ಕಟ್ಟಡವನ್ನು ಹೊಂದುವಂತಾಗಲಿ ಎಂದು ಶುಭ ಹಾರೈಸಿದರು.


ವ್ಯವಹಾರ ಕ್ಷೇತ್ರದಲ್ಲಿ ಛಲ,ಹಠವಿದ್ದರೆ ಯಾವುದೇ ಸಾಧನೆಯನ್ನು ಸಾಧಿಸಬಹುದು – ಮೋಹನ್ ಗೌಡ ಇಡ್ಯಡ್ಕ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಪ್ರವರ್ತಕರಾದ ಮೋಹನ್ ಗೌಡ ಇಡ್ಯಡ್ಕ ಮಾತನಾಡಿ ಆರ್ಥಿಕ ಶಿಸ್ತು, ಸೇವಾ ತಾತ್ಪರತೆ, ಗ್ರಾಹಕರ ವಿಶ್ವಾಸವನ್ನು ಹೊಂದುವುದರ ಜೊತೆಗೆ, ವ್ಯವಹಾರ ಕ್ಷೇತ್ರದಲ್ಲಿ ಹಠ ಮತ್ತು ಸಾಧಿಸುವ ಛಲವಿದ್ದರೆ ಯಾವುದೇ ಸಾಧನೆಯನ್ನು ಮಾಡಬಹುದು ಎಂಬುದನ್ನು ಸಂಘವು ಮಾಡಿ ತೋರಿಸಿದೆ, ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಿ ಮಾದರಿ ಸಹಕಾರಿ ಸಂಘವಾಗಿ ಮೂಡಿಬರಲಿ ಎಂದರು.


ನಗುಮೊಗದ ಸೇವೆ, ಗೌರವ,ವ್ಯವಹಾರ ಧರ್ಮವೇ ಸಂಸ್ಥೆಯ ಯಶಸ್ವಿಗೆ ಕಾರಣ -ಸುಭಾಷ್ ರೈ ಕಡಮಜಲು
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಕೃಷಿಕರಾದ ಸುಭಾಷ್ ರೈ ಕಡಮಜಲು ಮಾತನಾಡಿ ಕುಂಬ್ರ ಶಾಖೆಯ ಸಿಬ್ಬಂದಿ ವರ್ಗದವರ ನಗುಮೊಗದ ಸೇವೆ ಗೌರವ,ವ್ಯವಹಾರ ಧರ್ಮ ಸಂಘದ ಅಭಿವೃದ್ಧಿಗೆ ಪೂರಕವಾಗಿದೆ, ಸಂಘವು ವ್ಯವಹಾರಿಕ ಸಾಧನೆಯಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.


ಒಂದು ಜಾತಿಗೆ ಸೀಮಿತವಾಗದೆ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ -ಪಿ ಕೆ ಮಹಮ್ಮದ್
ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕುಂಬ್ರ ವರ್ತಕರ ಸಂಘದ ಅಧ್ಯಕ್ಷರಾದ ಪಿ ಕೆ ಮಹಮ್ಮದ್ ಮಾತನಾಡಿ ಒಂದು ಜಾತಿ ಸಂಘಟನೆಯಿಂದ ಆರಂಭಗೊಂಡ ಸಹಕಾರಿ ಸಂಘವು ಕೇವಲ ಒಂದು ಜಾತಿಗೆ ಸೀಮಿತವಾಗದೆ ಎಲ್ಲಾ ಜಾತಿ,ಧರ್ಮಗಳ ಗ್ರಾಹಕರ ಆರ್ಥಿಕ ಪ್ರಗತಿಗೆ ಸಹಕರಿಸುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಕುಂಬ್ರ ಶಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಕುಂಬ್ರ ಶಾಖೆಯು ಇನ್ನಷ್ಟು ಅಭಿವದ್ಧಿ ಪಥದಲ್ಲಿ ಮುನ್ನಡೆಯಲಿ ಎ ಕೆ ಜಯರಾಮ ರೈ
ಮುಖ್ಯ ಅತಿಥಿಗಳಾಗಿದ್ದ ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಎ ಕೆ ಜಯರಾಮ ರೈ ಮಾತನಾಡಿ ಯಶಸ್ವಿ 10 ವರ್ಷಗಳನ್ನು ಪೂರೈಸಿ ದಶಮಾನೋತ್ಸವದ ಸಂಭ್ರಮದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯು ಇನ್ನಷ್ಟು ಅಭಿವೃದ್ಧಿ ಫಥದಲ್ಲಿ ಮುನ್ನಡೆಯಲ್ಲಿ ಎಂದು ಶುಭ ಹಾರೈಸಿದರು.


ಗ್ರಾಹಕರ ಅತ್ಯುತ್ತಮ ಸೇವೆಯಿಂದ ಗ್ರಾಹಕ ಸ್ನೇಹಿಯಾಗಿರುವ ಕುಂಬ್ರ ಶಾಖೆಯು ಶತಮಾನೋತ್ಸವನ್ನು ಪೂರೈಸಲಿ -ಕೃಷ್ಣ ಕುಮಾರ್ ಉಪಾಧ್ಯಾಯ ಪಟ್ಲಮೂಲೆ
ಕಾರ್ಯಕ್ರಮದ ಮುಖ್ಯ ಅತಿಥಿ , ಪುರೋಹಿತರಾಗಿರುವ ಕೃಷ್ಣಕುಮಾರ್ ಉಪಾಧ್ಯಾಯ ಪಟ್ಲಮೂಲೆ ಮಾತನಾಡಿ ಗ್ರಾಹಕರಿಗೆ ನಗುಮೊಗದ ಸೇವೆ ನೀಡಿ ಗ್ರಾಹಕ ಸ್ನೇಹಿಯಾಗಿರುವ ಕುಂಬ್ರ ಶಾಖೆಯು ಶತಮಾನೋತ್ಸವ ವನ್ನು ಪೂರೈಸಲಿ ಎಂದು ಶುಭ ಹಾರೈಸಿದರು.


ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿರುವ ಸಹಕಾರಿ ಸಂಘ-ತ್ರಿವೇಣಿ ಪಲ್ಲತ್ತಾರು
ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ತ್ರಿವೇಣಿ ಪಳ್ಳತ್ತಾರು ಮಾತನಾಡಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿರುವ ಕುಂಬ್ರ ಶಾಖೆಯು ಇನ್ನಷ್ಟು ಅಭಿವೃದ್ಧಿ ಹೊಂದುವುದರ ಜೊತೆಗೆ ಸಂಘದ ಹೆಚ್ಚು ಹೆಚ್ಚು ಶಾಖೆಗಳು ಆರಂಭಗೊಳ್ಳಲಿ ಎಂದು ಶುಭಹಾರೈಸಿದರು.


ಜಾತಿ ಸಂಘಟನೆಗಳು ಸೌಹಾರ್ದತೆಗೋಸ್ಕರವೇ ಹೊರತು ಸಂಘರ್ಷಕಲ್ಲ- ರವಿ ಮುಂಗ್ಲಿಮನೆ
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷರಾದ ರವಿ ಮುಂಗ್ಲಿಮನೆ ಮಾತನಾಡಿ ಸಂಘದ ಅಭಿವದ್ಧಿ ಕುರಿತು ಪ್ರಸಂಶೆ ವ್ಯಕ್ತಪಡಿಸಿ,ಜಾತಿ ಸಂಘಟನೆಗಳು ತಮ್ಮ ತಮ್ಮ ಜಾತಿ ಸಂಘಟನೆ, ಸಮಾಜದ ಸೌಹಾರ್ದತೆಗೋಸ್ಕರವೇ ಹೊರತು ಸಂಘರ್ಷಕಲ್ಲ ಎಂದರು.


ಗ್ರಾಹಕರ ಸಹಕಾರ ,ಸಲಹಾ ಸಮಿತಿಯ ನಿಸ್ವಾರ್ಥ ಸೇವೆ ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ ಶಾಖೆ ಅತ್ಯುತ್ತಮ ಸಾಧನೆಯಲ್ಲಿದೆ-ಲೋಕೇಶ್ ಚಾಕೋಟೆ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಮತ್ತು ಕುಂಬ್ರ ಶಾಖ ಸಲಹಾ ಸಮಿತಿ ಅಧ್ಯಕ್ಷರಾದ ಲೋಕೇಶ್ ಚಾಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿ ಕುಂಬ್ರ ಶಾಖೆಯು ಯಶಸ್ವಿ ಹತ್ತು ವರ್ಷಗಳನ್ನು ಪೂರೈಸಿದ್ದು, ಗ್ರಾಹಕ ಬಂಧುಗಳ ಸಹಕಾರ ,ಸಿಬ್ಬಂದಿ ವರ್ಗದವರ ನಗುಮೊಗದ ಸೇವೆ ಮತ್ತು ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿಯ ಸಂಪೂರ್ಣ ಸಹಕಾರದಿಂದ ಕುಂಬ್ರ ಶಾಖೆಯು ಅತ್ಯುತ್ತಮ ವ್ಯವಹಾರ ನಡೆಸುತ್ತಿದ್ದು,ಮುಂದೆಯೂ ಸಂಘದ ಪ್ರಗತಿಗೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.


ಗ್ರಾಹಕರ ಸಂಪೂರ್ಣ ಸಹಕಾರದಿಂದ 11 ನೀ ವರ್ಷಕ್ಕೆ ಪಾದಾರ್ಪಣೆ ಶಿವರಾಮ ಗೌಡ ಇದ್ಯಾಪೆ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರು,ಕುಂಬ್ರ ಶಾಖೆಯ ಆರಂಭದ ಸಂದರ್ಭದಲ್ಲಿ ಸಲಹಾ ಸಮಿತಿ ಅಧ್ಯಕ್ಷರಾಗಿದ್ದ, ಪ್ರಸ್ತುತ ಸಲಹಾ ಸಮಿತಿ ಸದಸ್ಯರಾಗಿರುವ ಶಿವರಾಮ ಗೌಡ ಇದ್ಯಾಪೆ ಮಾತನಾಡಿ ಶಾಖೆಯ ಆರಂಭದಿಂದಲೂ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ,ಸಲಹಾ ಸಮಿತಿಯ ಸಂಪೂರ್ಣ ಸಹಕಾರದಿಂದ ಇಂದು ಶಾಖೆಯು ಅತ್ಯುತ್ತಮ ಪಥದಲ್ಲಿ ಮುನ್ನೆಡುತ್ತಿದ್ದು ಎಲ್ಲರ ಸಹಕಾರಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ, ಗೌರವಾರ್ಪಣೆ
ದಶಮಾನೋತ್ಸವ ಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀನಿವಾಸ ಗೌಡ ಕನ್ನಯ,ಸಾಮಾಜಿಕ ಕ್ಷೇತ್ರದಲ್ಲಿ ಗಂಗಾಧರ ಗೌಡ ಕೆಮ್ಮಾರ,ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ರವಿರಾಮ ಭಟ್ ಜಮದಗ್ನಿ, ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕೃಷಿ ಪದವಿ ಪಡೆದ ಕನ್ನಯ ಬೆಳಿಯಪ್ಪ ಗೌಡರ ಪುತ್ರಿ ಹಿತಾಶ್ರೀ ಕೆ. ಬಿ, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ ಬೆಂಗಳೂರು 2025 ರ ಎಂ,ಡಿ ಪರೀಕ್ಷೆಯಲ್ಲಿ ಅತ್ಯುತ್ತಮ ರಾಂಕ್ ಪಡೆದ ಉಮಾಕಾಂತ್ ಬೈಲಾಡಿಯವರ ಪುತ್ರಿ ಧನ್ಯಶ್ರೀ ಬೈಲಾಡಿ,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ನಿರ್ದೇಶಕರು,ಕುಂಬ್ರ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಲೋಕೇಶ್ ಚಾಕೋಟೆ, ನಿರ್ದೇಶಕ ಹಾಗೂ ಸಲಹಾ ಸಮಿತಿ ಉಪಾಧ್ಯಕ್ಷ ಸತೀಶ್ ಪಂಬಾರು, ಈ ಹಿಂದೆ ಕುಂಬ್ರ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರಾಗಿದ್ದ ಪ್ರಸ್ತುತ ಸದಸ್ಯರಾಗಿರುವ ಶಿವರಾಮ ಗೌಡ ಇದ್ಯಾಪೆ,ಈ ಹಿಂದೆ ಸಲಹಾ ಸಮಿತಿ ಉಪಾಧ್ಯಕ್ಷರಾಗಿದ್ದ ಪ್ರಸ್ತುತ ಸದಸ್ಯರಾಗಿರುವ ರೇಖಾ ಆರ್ ಗೌಡ ಇವರುಗಳನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಧಾಕರ್ ಕೆ ನಿರ್ವಹಿಸಿದರು.


ನಿರ್ದೇಶಕರಿಗೆ, ಸಲಹಾ ಸಮಿತಿ ಸದಸ್ಯರಿಗೆ, ಗ್ರಾಹಕರಿಗೆ, ಸಿಬ್ಬಂದಿ ವರ್ಗಕ್ಕೆ ಗೌರವಾರ್ಪಣೆ
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಗೌಡ ಯು ಪಿ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ,ಜಿನ್ನಪ್ಪ ಗೌಡ ಮಲುವೆಲು, ಮೋಹನ್ ಗೌಡ ಇಡ್ಯಾಡ್ಕ, ಸುದರ್ಶನ ಗೌಡ ಕೆ,ಸಂಜೀವ ಗೌಡ ಕೆ, ಪ್ರವೀಣ್ ಕುಂಟ್ಯಾನ, ಸುಪ್ರೀತಾ ರವಿಚಂದ್ರ,ತೇಜಸ್ವಿನಿ ಶೇಖರ ಗೌಡ ಮತ್ತು ಕುಂಬ್ರ ಸಲಹಾ ಸಮಿತಿ ಸದಸ್ಯರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ಶ್ರೀಧರ ಗೌಡ ಅಂಗಡಿಹಿತ್ಲು,ವಿಶ್ವನಾಥ ಗೌಡ ಬೊಳ್ಳಾಡಿ,ಶ್ರೀಧರ ಗೌಡ ಎರಕ್ಕಲ, ಉಮೇಶ್ ಗೌಡ ಕನ್ನಯ,ರಾಮಣ್ಣ ಗೌಡ ಬಸವಹಿತ್ಲು,ವಿಜಯಭಾರತಿ,ಚಂದ್ರ ಶೇಖರ ಗೌಡ ಸಾರೆಪ್ಪಾಡಿ,ತಿರುಮಲೇಶ್ವರ ಗೌಡ ದೊಡ್ಡಮನೆ,ರಾಮಕೃಷ್ಣ ಗೌಡ ಸಾಮೇತಡ್ಕ ಸುಬ್ರಾಯ ಗೌಡ ಪಾಲ್ತಾಡಿ, ಗ್ರಾಹಕರಾದ ವೆಂಕಪ್ಪ ಗೌಡ ಬೊಳ್ಳಡಿ, ರಾಮಣ್ಣ ಗೌಡ ಕೆಯ್ಯೂರು, ಅಮ್ಮು ರೈ ಜಯಪ್ರಕಾಶ್ ಕೊಳ್ತಿಗೆ, ಲೀಲಾವತಿ ಬಿ ಆರ್, ಮಾಧವ ನಾಯರ್, ಮೋಹನ್ ,ಸಂಜೀವ ಗೌಡ ಪಾಲ್ತಾಡಿ,ರಾಮಕೃಷ್ಣ ಭಟ್,ಸದಾಶಿವ ಭಟ್, ಮೋಯಿದ್ ಕುಂಞಿ,ಮಹಮ್ಮದ್, ವರಿಜಾಕ್ಷಿ ,ರಾಧಾ,ಸುರೇಶ್, ಕರುಣಾಕರ ಪಾಲ್ತಾಡಿ, ಪ್ರಕಾಶ, ಸಂಘದ ಇಂಜಿನಿಯರ್ ಶರತ್, ಸರಪಾರ ಜಯರಾಮ ಕಟ್ಟಡ ಮಾಲಕರಾದ ಪರಮೇಶ್ವರ ಗೌಡ, ಕುಂಬ್ರ ಶಾಖಾ ಮೆನೇಜರ್ ಹರೀಶ್ ವೈ, ಸಿಬ್ಬಂದಿಗಳಾದ ಸಂಧ್ಯಾ, ದಿನೇಶ್ ಕುಮಾರ್ ಬಿ, ಪಿಗ್ಮಿ ಸಂಗ್ರಾಹಾಕರಾದ ಅನುರಾಜ್ ಪಿ, ಅಶ್ವಥ್ ಪಿ , ಕುಂಬ್ರ ಶಾಖೆಯಲ್ಲಿ ಈ ಹಿಂದೆ ಸಿಬ್ಬಂದಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಸಿಬ್ಬಂದಿಗಳನ್ನು, ಮಾಜಿ ನಿರ್ದೇಶಕರಗಳನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ತನ್ವಿ ಬೊಳ್ಳಾಡಿ ಪ್ರಾರ್ಥಿಸಿ, ಲೋಕೇಶ್ ಚಾಕೋಟೆ ಸ್ವಾಗತಿಸಿದರು. ಸತೀಶ್ ಪಾಂಬಾರು ವಂದಿಸಿದರು. ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here