ಪುತ್ತೂರು: ಪುತ್ತೂರು ಬಿಲ್ಲವ ಗ್ರಾಮ ಸಮಿತಿ ಕಬಕ ಹಾಗೂ ಬಿಲ್ಲವ ಮಹಿಳಾ ವೇದಿಕೆ ಕಬಕ ಇದರ ಆಶ್ರಯದಲ್ಲಿ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸುದಾನ ವಸತಿ ಶಾಲೆಯಲ್ಲಿ ಜೂ. 22 ರಂದು ನಡೆಯಿತು.
ಕಬಕ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾದ ವಸಂತ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಸಂಘ ಪುತ್ತೂರು ಇದರ ಉಪಾಧ್ಯಕ್ಷರಾದ ವಿಮಲಾ ಸುರೇಶ್, ಕಾರ್ಯದರ್ಶಿಯಾದ ಚಿದಾನಂದ ಸುವರ್ಣ, ಕಾರ್ಯ ನಿರ್ವಹಣಾಧಿಕಾರಿಯಾಗಿರುವ ಉದಯ ಕುಮಾರ್ ಕೋಲಾಡಿ,ಯುವವಾಹಿನಿ ಪುತ್ತೂರು ಇದರ ಅಧ್ಯಕ್ಷರು ಸಂಚಾಲಕರಾದ ಅಣ್ಣಿ ಪೂಜಾರಿ , ಬಿಲ್ಲವ ಗ್ರಾಮ ಸಮಿತಿ ಕಬಕ ಇದರ ಸ್ಥಾಪಕಾಧ್ಯಕ್ಷರಾದ ಜಿನ್ನಪ್ಪ ಪೂಜಾರಿ, ಬಿಲ್ಲವ ಮಹಿಳಾ ವೇದಿಕೆ ಕಬಕ ಇದರ ಅಧ್ಯಕ್ಷರಾದ ಯಶೋಧ ಬಿರಾವ್ , ಉದ್ಯಮಿ ರಾಮಣ್ಣ ಪೂಜಾರಿ ,ಬಿಲ್ಲವ ಗ್ರಾಮ ಸಮಿತಿ ಪುತ್ತೂರು ಇದರ ಮಾಜಿ ಅಧ್ಯಕ್ಷರಾದ ಕೇಶವ ಪೂಜಾರಿ,ಧನು ಪಟ್ಲ, ರಜನೀಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2025 – 26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಬಿಲ್ಲವ ಗ್ರಾಮ ಸಮಿತಿ ಕಬಕ ಇದರ ನೂತನ ಅಧ್ಯಕ್ಷರಾಗಿ ಮನೋಹರ್ ಕಾರ್ಜಲ್,ಉಪಾಧ್ಯಕ್ಷರಾಗಿ ಕರುಣಾಕರ ಪೂಜಾರಿ, ಕಾರ್ಯದರ್ಶಿಯಾಗಿ ಶೇಖರ ಪೂಜಾರಿ ಪಟ್ಲ, ಜೊತೆ ಕಾರ್ಯದರ್ಶಿಯಾಗಿ ಕುಶಲ ಸುವರ್ಣ , ಕೋಶಾಧಿಕಾರಿಯಾಗಿ ಉಮೇಶ್ ಪೂಜಾರಿ ಆಯ್ಕೆಗೊಂಡರು. ಬಿಲ್ಲವ ಮಹಿಳಾ ವೇದಿಕೆ ಕಬಕ ಇದರ ನೂತನ ಅಧ್ಯಕ್ಷರಾಗಿ ಪ್ರಿಯಾಂಕಾ ,ಉಪಾಧ್ಯಕ್ಷರಾಗಿ ಮಮತಾ,ಕಾರ್ಯದರ್ಶಿಯಾಗಿ ರೇಖಾ, ಜೊತೆಕಾರ್ಯದರ್ಶಿಯಾಗಿ ಸ್ವಾತಿ, ಕೋಶಾಧಿಕಾರಿಯಾಗಿ ಶಿಲ್ಪ ಆಯ್ಕೆಗೊಂಡರು. ಕುಮಾರಿ ಸಾನಿಧ್ಯ ಮತ್ತು ತ್ರಿಶ ಪ್ರಾರ್ಥಿಸಿ,ಕಲಾವಿದ ಕೃಷ್ಣಪ್ಪರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಮಮತಾ ವಂದಿಸಿದರು.