ಬಡಗನ್ನೂರು: ಸುಳ್ಯಪದವು ಸ್ವಾಮಿ ಕೊರಗಜ್ಜ ಯಕ್ಷಗಾನ ಕಲಾ ಸಂಘದ 2025 -26ನೇ ಸಾಲಿನ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಸಮಾರಂಭ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸ್ವಾಮಿ ಕೊರಗಜ್ಜ ಕ್ಷೇತ್ರದ ಖಜಾಂಚಿ ಭಾಸ್ಕರ್ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಯಕ್ಷಗುರು ಚಂದ್ರಶೇಖರ್ ಸುಳ್ಯಪದವು, ರಮಾಕಾಂತಿ ಬೊಳಂಕೂಡ್ಲು, ಉದಯ ಕುಮಾರ್ ಕನ್ನಡ್ಕ ಹಾಗೂ ಪೋಷಕ ಬಂಧುಗಳು ಉಪಸ್ಥಿತರಿದ್ದರು.

ಯಕ್ಷಗಾನ ನಾಟ್ಯ ತರಗತಿ ಪ್ರತಿ ಆದಿತ್ಯವಾರ ಅಪರಾಹ್ನ ಶಬರಿನಗರ ಸ್ವಾಮಿ ಕೊರಗಜ್ಜ ಸಭಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಗುರುಗಳು ಚಂದ್ರಶೇಖರ ಸುಳ್ಯಪದವು ತಿಳಿಸಿದ್ದಾರೆ.