ಅಲೆಪ್ಪಾಡಿ ರುಕ್ಮಯ್ಯ ಗೌಡರ ಶ್ರದ್ಧಾಂಜಲಿ ಕಾರ್ಯಕ್ರಮ

0

ರಾಮಕುಂಜ: ಜೂ.9ರಂದು ನಿಧನರಾದ ಕೆಎಸ್‌ಆರ್‌ಟಿಸಿ ನಿವೃತ್ತ ನಿರ್ವಾಹಕ, ಕೊಲ ಗ್ರಾಮದ ಕಲಾಯಿ ಅಲೆಪ್ಪಾಡಿ ನಿವಾಸಿ ದಿ| ರುಕ್ಮಯ್ಯ ಗೌಡರ ಶ್ರದ್ಧಾಂಜಲಿ ಕಾರ್ಯಕ್ರಮ ಜೂ.24ರಂದು ಅಲೆಪ್ಪಾಡಿ-ಕಲಾಯಿ ಮನೆಯಲ್ಲಿ ನಡೆಯಿತು.


ರಾಧಾಕೃಷ್ಣ ಕೆರ್ನಡ್ಕ ಅವರು ನುಡಿನಮನ ಸಲ್ಲಿಸಿ, ಪ್ರತಿಷ್ಠಿತ ಅಲೆಪ್ಪಾಡಿ ಕುಟುಂಬದಲ್ಲಿ ಹುಟ್ಟಿದ ರುಕ್ಮಯ್ಯ ಗೌಡ ಅವರು ಕುಟುಂಬದ ಘನತೆಗೆ ತಕ್ಕಂತೆ ಬೆಳೆದಿದ್ದರು. ಹಲವು ವರ್ಷ ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಹಳೆನೇರೆಂಕಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸ್ಥಾಪಕಾಧ್ಯಕ್ಷರಾಗಿ, ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಅರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಹಳೆನೇರೆಂಕಿಯಲ್ಲಿ ಹಿಂದೂ ಸಂಘಟನೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಹಳೆನೇರೆಂಕಿ ಸರಕಾರಿ ಹಿ.ಪ್ರಾ.ಶಾಲೆಯ ಹಳೆವಿದ್ಯಾರ್ಥಿ ಸಂಘದ ಸಕ್ರಿಯ ಸದಸ್ಯರಾಗಿದ್ದರು. ಒಟ್ಟಿನಲ್ಲಿ ಅವರ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.


ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ 1 ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೃತರ ಪತ್ನಿ, ಕಡಬ ತಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಪುತ್ರರಾದ ಕಾರ್ತಿಕ್, ಕೃತಿಕ್, ಸೊಸೆಯಂದಿರಾದ ನಿಶ್ಮಿತಾ, ಭವ್ಯಾ, ಸಹೋದರರಾದ ಮಾಯಿಲಪ್ಪ ಗೌಡ, ಧರ್ಣಪ್ಪ ಗೌಡ, ವಿಶ್ವನಾಥ ಗೌಡ ಹಾಗೂ ಅಲೆಪ್ಪಾಡಿ ಮನೆಯವರು ಅತಿಥಿಗಳನ್ನು ಸತ್ಕರಿಸಿದರು.

LEAVE A REPLY

Please enter your comment!
Please enter your name here