ನಿಡ್ಪಳ್ಳಿ: ಇಲ್ಲಿನ ತಂಬುತ್ತಡ್ಕದಿಂದ ಕಾನ ಮೂಲಕ ನಿಡ್ಪಳ್ಳಿ ಶಾಲೆಗೆ ಹೋಗುವ ಕಾಲು ದಾರಿಯ ಹೊಸಮನೆ ಎಂಬಲ್ಲಿ ಕಾಲು ದಾರಿ ಬದಿ ಕುಸಿದ ಪರಿಣಾಮ ಪಾದಾಚಾರಿಗಳಿಗೆ ನಡೆದಾಡಲು ಭೀತಿ ಎದುರಾಗಿದೆ. ರಾತ್ರಿ ಸಮಯದಲ್ಲಿ ಹೋಗುವಾಗ ಸ್ವಲ್ಪ ಯಾಮಾರಿದರೂ ತೋಡಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ.

ದಾರಿಯು ನೀರು ಹರಿಯುತ್ತಿರುವ ತೋಡಿನ ಬದಿಯಲ್ಲಿ ಇರುವುದರಿಂದ ಮಣ್ಣು ದಾರಿಯ ಬದಿವರೆಗೆ ಕುಸಿದಿದೆ.
ಈ ದಾರಿಯಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಸೇರಿದಂತೆ ಪ್ರತಿನಿತ್ಯ ಹಲವಾರು ಜನರು ಸಂಚರಿಸುತ್ತಿದ್ದಾರೆ. ಬದಿ ಇನ್ನಷ್ಟು ಕುಸಿದರೆ ಸಂಚಾರಕ್ಕೆ ಕಾಲು ದಾರಿಯೆ ಇಲ್ಲದಾಗುವ ಪರಿಸ್ಥಿತಿ ಉಂಟಾಗಲಿದೆ ಎಂದು ಅಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.