ಪುತ್ತೂರು: ಬೃಹದಾಕಾರದ ಮರವೊಂದು ರಸ್ತೆಗೆ ಬಿದ್ದು ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಗಿದ್ದು, ಬಳಿಕ ಅದನ್ನು ಅರಣ್ಯ ಇಲಾಖೆಯವರು ತೆರವು ಮಾಡಿರುವ ಘಟನೆ ಜೂ.24ರಂದು ಮುಂಡೂರು ಗ್ರಾಮದ ಕೊಂಬಳ್ಳಿ ಬಾವಿಕಟ್ಟೆ ಬಳಿ ನಡೆದಿದೆ.
ಮರ ರಸ್ತೆಗೆ ಬಿದ್ದ ವಿಚಾರವನ್ನು ಸ್ಥಳೀಯರು ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಆಚಾರ್ಯ ಅವರ ಗಮನಕ್ಕೆ ತಂದಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪ್ರವೀಣ್ ಆಚಾರ್ಯ ಅವರು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಂಜಿನಿಯರ್ರವರ ಗಮನಕ್ಕೆ ತಂದಿದ್ದರು. ಸ್ಥಳೀಯರಾದ ಪ್ರಕಾಶ್ ಭಟ್ ಅವರು ಮರ ತೆರವಿಗೆ ತಮ್ಮ ಮೆಷಿನ್ ನೀಡುವ ಮೂಲಕ ಸಹಕರಿಸಿದರು. ಮರ ತೆರವಿಗೆ ವಿಶೇಷ ಮುತುವರ್ಜಿ ವಹಿಸಿದ ಪ್ರವೀಣ್ ಆಚಾರ್ಯರವರಿಗೆ ಮತ್ತು ತೆರವು ಮಾಡಿದ ಇಲಾಖೆಗೆ ಸ್ಥಳೀಯರು ಅಭಿನಂದನೆ ಸಲ್ಲಿಸಿದ್ದಾರೆ.